ಅರವಿಂದ್ ಕೇಜ್ರಿವಾಲ್ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ಲಕ್ಷ ಮತಗಳಿಂದ ಸೋತವರಿಗೆಲ್ಲಿ ಮರ್ಯಾದೆ?

``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"..

ನವದೆಹಲಿ: ``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"

ಹೀಗೆಂದು ಹೇಳಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಡಿಸಿಎ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಜೇಟ್ಲಿ ಹೂಡಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿ ಮಂಗಳವಾರ  ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಕೇಜ್ರಿವಾಲ್, ತಾವು ಭಾರಿ ಸಾರ್ವಜನಿಕ ಮರ್ಯಾದೆ ಹೊಂದಿದ್ದೇನೆ ಎಂಬ ಜೇಟ್ಲಿವಾದ ಸಂಪೂರ್ಣ ಸುಳ್ಳುನಿಂದ ಕೂಡಿದೆ ಎಂದಿದ್ದಾರೆ.

"2014ರಲ್ಲಿ ಜೇಟ್ಲಿ ಅವರು ಅಮೃತಸರದಿಂದ ಬಿಜೆಪಿ ಅಭರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದರೂ, ಜೇಟ್ಲಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಸೋತರು. ಒಟ್ಟಿನಲ್ಲಿ ಭಾರತೀಯ ಪ್ರಜಾಸತ್ತೆಯು ಅವರಿಗೆ ಅಂತಹ ಮರ್ಯಾದೆಯನ್ನು ಕೊಡಲಿಲ್ಲ. ಡಿಡಿಸಿಎ ಪ್ರಕರಣ ಸಂಬಂಧ ಅವರ ಘನತೆಗೆ ಅವರು ಹೇಳಿಕೊಳ್ಳುವಂತೆ ಯಾವ ಹಾನಿಯೂ ಆಗಿಲ್ಲ. ನಾವು ಮಾಡಿರುವ ಆರೋಪವು ಅವರು ಅವರ ವೈಯುಕ್ತಿಕ ವ್ಯಕ್ತಿತ್ವಕ್ಕಂತೂ ಹಾನಿ ಮಾಡುವುದಿಲ್ಲ. ಹಾನಿ ಮಾಡುವುದಿದ್ದರೆ ಅದು ಅವರು ಸಾರ್ವಜನಿಕ ವರ್ಚಸ್ಸಿಗೆ"  ಎಂದಿದ್ದಾರೆ ಕೇಜ್ರಿವಾಲ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT