ಅರವಿಂದ್ ಕೇಜ್ರಿವಾಲ್ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ಲಕ್ಷ ಮತಗಳಿಂದ ಸೋತವರಿಗೆಲ್ಲಿ ಮರ್ಯಾದೆ?

``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"..

ನವದೆಹಲಿ: ``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"

ಹೀಗೆಂದು ಹೇಳಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಡಿಸಿಎ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಜೇಟ್ಲಿ ಹೂಡಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿ ಮಂಗಳವಾರ  ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಕೇಜ್ರಿವಾಲ್, ತಾವು ಭಾರಿ ಸಾರ್ವಜನಿಕ ಮರ್ಯಾದೆ ಹೊಂದಿದ್ದೇನೆ ಎಂಬ ಜೇಟ್ಲಿವಾದ ಸಂಪೂರ್ಣ ಸುಳ್ಳುನಿಂದ ಕೂಡಿದೆ ಎಂದಿದ್ದಾರೆ.

"2014ರಲ್ಲಿ ಜೇಟ್ಲಿ ಅವರು ಅಮೃತಸರದಿಂದ ಬಿಜೆಪಿ ಅಭರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದರೂ, ಜೇಟ್ಲಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಸೋತರು. ಒಟ್ಟಿನಲ್ಲಿ ಭಾರತೀಯ ಪ್ರಜಾಸತ್ತೆಯು ಅವರಿಗೆ ಅಂತಹ ಮರ್ಯಾದೆಯನ್ನು ಕೊಡಲಿಲ್ಲ. ಡಿಡಿಸಿಎ ಪ್ರಕರಣ ಸಂಬಂಧ ಅವರ ಘನತೆಗೆ ಅವರು ಹೇಳಿಕೊಳ್ಳುವಂತೆ ಯಾವ ಹಾನಿಯೂ ಆಗಿಲ್ಲ. ನಾವು ಮಾಡಿರುವ ಆರೋಪವು ಅವರು ಅವರ ವೈಯುಕ್ತಿಕ ವ್ಯಕ್ತಿತ್ವಕ್ಕಂತೂ ಹಾನಿ ಮಾಡುವುದಿಲ್ಲ. ಹಾನಿ ಮಾಡುವುದಿದ್ದರೆ ಅದು ಅವರು ಸಾರ್ವಜನಿಕ ವರ್ಚಸ್ಸಿಗೆ"  ಎಂದಿದ್ದಾರೆ ಕೇಜ್ರಿವಾಲ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT