ಅರವಿಂದ್ ಕೇಜ್ರಿವಾಲ್ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ಲಕ್ಷ ಮತಗಳಿಂದ ಸೋತವರಿಗೆಲ್ಲಿ ಮರ್ಯಾದೆ?

``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"..

ನವದೆಹಲಿ: ``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"

ಹೀಗೆಂದು ಹೇಳಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಡಿಸಿಎ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಜೇಟ್ಲಿ ಹೂಡಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿ ಮಂಗಳವಾರ  ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಕೇಜ್ರಿವಾಲ್, ತಾವು ಭಾರಿ ಸಾರ್ವಜನಿಕ ಮರ್ಯಾದೆ ಹೊಂದಿದ್ದೇನೆ ಎಂಬ ಜೇಟ್ಲಿವಾದ ಸಂಪೂರ್ಣ ಸುಳ್ಳುನಿಂದ ಕೂಡಿದೆ ಎಂದಿದ್ದಾರೆ.

"2014ರಲ್ಲಿ ಜೇಟ್ಲಿ ಅವರು ಅಮೃತಸರದಿಂದ ಬಿಜೆಪಿ ಅಭರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದರೂ, ಜೇಟ್ಲಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಸೋತರು. ಒಟ್ಟಿನಲ್ಲಿ ಭಾರತೀಯ ಪ್ರಜಾಸತ್ತೆಯು ಅವರಿಗೆ ಅಂತಹ ಮರ್ಯಾದೆಯನ್ನು ಕೊಡಲಿಲ್ಲ. ಡಿಡಿಸಿಎ ಪ್ರಕರಣ ಸಂಬಂಧ ಅವರ ಘನತೆಗೆ ಅವರು ಹೇಳಿಕೊಳ್ಳುವಂತೆ ಯಾವ ಹಾನಿಯೂ ಆಗಿಲ್ಲ. ನಾವು ಮಾಡಿರುವ ಆರೋಪವು ಅವರು ಅವರ ವೈಯುಕ್ತಿಕ ವ್ಯಕ್ತಿತ್ವಕ್ಕಂತೂ ಹಾನಿ ಮಾಡುವುದಿಲ್ಲ. ಹಾನಿ ಮಾಡುವುದಿದ್ದರೆ ಅದು ಅವರು ಸಾರ್ವಜನಿಕ ವರ್ಚಸ್ಸಿಗೆ"  ಎಂದಿದ್ದಾರೆ ಕೇಜ್ರಿವಾಲ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT