ಕಿಕೂ ಶಾರ್ದಾ 
ದೇಶ

ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ನಟ ಕಿಕೂ ಶಾರ್ದಾ ಬಂಧನ

ಪ್ರತಿಷ್ಠಿತ ಮನರಂಜನಾ ಕಾರ್ಯಕ್ರಮವೆಂದೇ ಹೆಸರು ಮಾಡಿರುವ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಪ್ರಮುಖ ನಟರಾಗಿರುವ ಕಿಕು ಶಾರದ ಅವರನ್ನು ಬಂಧಿಸಲಾಗಿದೆ.

ನವದೆಹಲಿ:ಪ್ರತಿಷ್ಠಿತ ಮನರಂಜನಾಕಾರ್ಯಕ್ರಮವೆಂದೇ ಹೆಸರು ಮಾಡಿರುವಕಾಮಿಡಿ ನೈಟ್ಸ್ ವಿತ್ ಕಪಿಲ್ಕಾರ್ಯಕ್ರಮದಲ್ಲಿ ಪ್ರಮುಖನಟರಾಗಿರುವ ಕಿಕು ಶಾರದ ಅವರನ್ನುಬುಧವಾರ ಬಂಧನಕ್ಕೊಳಪಡಿಸಲಾಗಿದೆ.
ಸ್ವಯಂ ಘೋಷಿತ ಬಾಬಾ ಹಾಗೂಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ರಾಮ್ ರಹೀಮ್ ಸಿಂಗ್ ಅವರ ಕುರಿತಂತೆಮಿಮಿಕ್ರಿ ಮಾಡಿ
, ಧಾರ್ಮಿಕಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆಂದು ಕಿಕು ಶಾರದ ಅವರವಿರುದ್ಧ ದೂರು ದಾಖಲಾಗಿರುವಹಿನ್ನೆಲೆಯಲ್ಲಿ ಕಿಕು ಅವರನ್ನುಬಂಧನಕ್ಕೊಳಪಡಿಸಲಾಗಿದೆ ಎಂದುತಿಳಿದುಬಂದಿದೆ.
ಗುರ್ಮೀತ್ರಾಮ್ ರಹೀಮ್ ಸಿಂಗ್ ಅವರ ಶೈಲಿಹಾಗೂ ಹಾವಭಾವಗಳನ್ನು ಅನುಕರಿಸಿಕಿಕು ಶಾರದ ಅವರು ಮಿಮಿಕ್ರಿಯೊಂದನ್ನುಮಾಡಿದ್ದರು. ಇದರಕಾರ್ಯಕ್ರಮ ಕಳೆದ ವರ್ಷ ಡಿಸೆಂಬರ್ತಿಂಗಳಲ್ಲಿ ಖಾಸಗಿ ವಾಹಿನಿಯೊಂದರಲ್ಲಿಪ್ರಸಾರವಾಗಿತ್ತು. ಈಕಾರ್ಯಕ್ರಮ ಹಲವು ವಿವಾದಗಳನ್ನುಹುಟ್ಟುಹಾಕಿತ್ತು. ಕಾರ್ಯಕ್ರಮಪ್ರಸಾರದ ನಂತರ ಗುರ್ಮೀತ್ ಅವರಅನುಯಾಯಿಗಳು, ಕಿಕುಶಾರದಾ ಅವರು ಧಾರ್ಮಿಕ ಭಾವನೆಗಳಿಗೆಧಕ್ಕೆಯುಂಟು ಮಾಡಿದ್ದಾರೆಂದುಪ್ರಕರಣವೊಂದನ್ನು ದಾಖಲಿಸಿದ್ದರು.ನಂತರ ತಮ್ಮ ನಟನೆ ಕುರಿತಂತೆಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಕಿಕು ಶಾರದ ಅವರು, ಯಾರಿಗೂನೋವುಂಟು ಮಾಡುವ ಹಾಗೂ ಭಾವನೆಗಳಿಗೆಧಕ್ಕೆಯುಂಟು ಮಾಡುವ ಉದ್ದೇಶನನ್ನದಾಗಿರಲಿಲ್ಲ. ನನ್ನಿಂದಯಾರಿಗಾದರೂ ನೋವಾಗಿದ್ದರೆ ಕ್ಷಮೆಕೋರುತ್ತೇನೆಂದು ಹೇಳಿಕೊಂಡಿದ್ದರು.ಬಾಬಾ ಅವರ ಅನುಯಾಯಿಗಳುಮುಂಬೈ ಪೊಲೀಸ್ ಠಾಣೆಯಲ್ಲಿದಾಖಲಿಸಿರುವ ಪ್ರಕರಣ ಕುರಿತಂತೆಕ್ರಮ ಕೈಗೊಂಡಿರುವ ಅಧಿಕಾರಿಗಳು,ಕಿಕು ಶಾರದಾ ಅವರನ್ನುಬಂಧನಕ್ಕೊಳಪಡಿಸಿದ್ದಾರೆ.
ಅಲ್ಲದೆ, ನ್ಯಾಯಾಲಯದಮುಂದೆ ಹಾಜರುಪಡಿಸಿದ್ದಾರೆ.ವಿಚಾರಣೆ ನಡೆಸಿರುವನ್ಯಾಯಾಧೀಶರು ಇದೀಗ ಕಿಕು ಶಾರದಅವರಿಗೆ 12 ದಿನಗಳ ಕಾಲನ್ಯಾಯಾಂಗ ಬಂಧನ ವಿಧಿಸಿದೆ ಎಂದುತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT