ಸುನಂದಾ ಪುಷ್ಕರ್ ಮತ್ತು ಸುಬ್ರಮಣಿಯನ್ ಸ್ವಾಮಿ 
ದೇಶ

ಸುನಂದಾ ದೇಹದಲ್ಲಿ ಯಾವ ವಿಷವಿತ್ತು ಎಂಬದನ್ನು ಬಸ್ಸಿ ಬಹಿರಂಗ ಪಡಿಸುತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ

ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಸಾವಿಗೆ ನಿಖರವಾದ ವಿಷ ಯಾವುದು ಎಂಬುದನ್ನು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಬಹಿರಂಗ ...

ನವದೆಹಲಿ: ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಸಾವಿಗೆ ನಿಖರವಾದ ವಿಷ ಯಾವುದು ಎಂಬುದನ್ನು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಬಹಿರಂಗ ಪಡಿಸುತ್ತಿಲ್ಲ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಆರೋಪಿಸಿದ್ದಾರೆ.

ಸುನಂದಾ ಸಾವಿಗೆ ಯಾವ ರಾಸಾಯನಿಕ ಮಿಶ್ರಣದ ವಿಷ ಕಾರಣವಾಯಿತೆಂಬುದನ್ನು ಪೊಲೀಸರು ತಿಳಿಸುತ್ತಿಲ್ಲ. ಇಂಜೆಕ್ಷನ್‌ ಮೂಲಕ ನೀಡಬಲ್ಲ ಲಿಡೋಕೇನ್‌ ಎಂಬ ವಿಷಕಾರಿ ಅಂಶವು ಸುನಂದಾ ಅವರ ದೇಹದಲ್ಲಿ ಕಂಡುಬಂದಿತ್ತು ಎಂದು ಎಫ್ ಬಿಐ  ಹೇಳಿರುವುದನ್ನು ಬಸ್ಸಿ ಅವರು ಮಾಧ್ಯಮಕ್ಕೆ ತಿಳಿಸಿಲ್ಲ' ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಏಮ್ಸ್ ನಿಂದ ಸುನಂದಾ ಪುಷ್ಕರ್‌ ಅವರ ಅಂಗಾಂಶಗಳ ಪರೀಕ್ಷಾ ವರದಿಯನ್ನು ನಿನ್ನೆ ಪಡೆದ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದ ದೆಹಲಿ ಪೊಲೀಸ್‌ ಮುಖ್ಯಸ್ಥ ಬಸ್ಸಿ ಅವರು "ಸುನಂದಾ ಅವರ ಸಾವು ಅಸಹಜ ಕಾರಣಗಳಿಂದಾಗಿ ಸಂಭವಿಸಿದೆ' ಎಂದು ಹೇಳಿದ್ದರು.ಎಫ್ ಬಿ ಐ ತನ್ನ ವರದಿಯಲ್ಲಿ  ನಮಗೆ ಕಳುಹಿಸಲಾದ ಅಂಗಾಂಶಗಳ ಯಾವುದೇ ಮಾದರಿಯಲ್ಲಿ ರೇಡಿಯೋ ಆಕ್ಟೀವ್‌ ಅಂಶಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿತ್ತು' ಎಂಬುದಾಗಿ ಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT