ದೇಶ

ಪಿಎಸ್ ಎಲ್ ವಿ-ಸಿ31 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

Sumana Upadhyaya

ಶ್ರೀ ಹರಿಕೋಟ: ಪಿಎಸ್ಎಲ್ ವಿ-ಸಿ 31 ಉಪಗ್ರಹ ಉಡಾವಣೆಗೆ ಆಂಧ್ರಪ್ರದೇಶದ ಶ್ರೀಹರಿಕೋಟ ಉಡ್ಡಯನ ಕೇಂದ್ರದಲ್ಲಿ 48 ಗಂಟೆಗಳ ಕ್ಷಣಗಣನೆ ಆರಂಭವಾಗಿದೆ.

ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ವಿಜ್ಞಾನಿಗಳು ಪರಿಶೀಲನೆ ನಡೆಸಿ ರಾಕೆಟ್ ಉಡಾವಣೆಗೆ ಪರಿಸ್ಥಿತಿ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಪ್ರಾದೇಶಿಕ ನೌಕಾಯಾನಶಾಸ್ತ್ರ ಉಪಗ್ರಹ ವ್ಯವಸ್ಥೆ-1ಇ (ಐಆರ್ ಎನ್ ಎಸ್ ಎಸ್) ಯನ್ನು ಉಪಗ್ರಹ ಹೊತ್ತೊಯ್ಯಲಿದೆ.

ಇಸ್ರೋ ವಿಜ್ಞಾನಿಗಳು ನೌಕಾಯಾನ ವ್ಯವಸ್ಥೆಗೆ ಸಂಬಂಧಪಟ್ಟ ಏಳು ಸರಣಿ ಉಪಗ್ರಹಗಳನ್ನು ತಯಾರಿಸುತ್ತಿದ್ದು, ಅವುಗಳಲ್ಲಿ ನಾಡಿದ್ದು ಉಡ್ಡಯನಗೊಳ್ಳುವ ಉಪಗ್ರಹ ಐದನೆಯದ್ದು. ಈಗಾಗಲೇ ಅಂತರಿಕ್ಷದಲ್ಲಿ ಕಾರ್ಯಾಚರಣೆಯಲ್ಲಿರುವ ಇತರ ನಾಲ್ಕು ಉಪಗ್ರಹಗಳಿಗೆ ಪೂರಕವಾಗಿ ಪಿಎಸ್ ಎಲ್ ವಿ-ಸಿ 31 ಕೆಲಸ ಮಾಡಲಿದೆ. ಈ ಏಳು ಸರಣಿ ಉಪಗ್ರಹಗಳು ಯಶಸ್ವಿಯಾಗಿ ಉಡಾವಣೆಗೊಂಡರೆ ವಿಶ್ವದ ಸ್ಥಾನೀಕರಣ ವ್ಯವಸ್ಥೆಗೆ ಭಾರತ ಸಮಾನವಾಗಲಿದೆ ಮತ್ತು ರಸ್ತೆ, ವಾಯು ಮತ್ತು ನೌಕಾ ಸೇವೆಗಳನ್ನು ಇನ್ನಷ್ಟು ವಿಶಾಲ ಪ್ರದೇಶಗಳಿಗೆ ವಿಸ್ತರಿಸಲು ಅನುಕೂಲವಾಗುತ್ತದೆ.

ಈ ವರ್ಷ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಉಪಗ್ರಹ ಉಡಾವಣಾ ಅಭಿಯಾನ ಪಿಎಸ್ ಎಲ್ ವಿ-ಸಿ 31 ಆಗಿದೆ. ಇನ್ನೆರಡು ಉಪಗ್ರಹಗಳನ್ನು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಉಡಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

SCROLL FOR NEXT