ದೇಶ

ಆಧ್ಯಾತ್ಮದತ್ತ ಆಕರ್ಷಿತಳಾಗಿ ಹಿಮಾಲಯಕ್ಕೆ ತೆರಳಿದ ಮದ್ರಾಸ್ ಐಐಅಟಿ ವಿದ್ಯಾರ್ಥಿನಿ!

Srinivas Rao BV

ಚೆನ್ನೈ: ಮದ್ರಾಸ್ ಐಐಟಿಯ ಎಂಎಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು, ಆಧ್ಯಾತ್ಮದತ್ತ ಆಕರ್ಷಿತಳಾಗಿದ್ದು ಹಿಮಾಲಯಕ್ಕೆ ತೆರಳಿದ್ದಾಳೆ.
ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಪ್ರತ್ಯುಷಾ, ಹಾಸ್ಟೆಲ್ ನಿಂದ ಹೊರಡುವುದಕ್ಕೂ ಮುನ್ನ ಪತ್ರವೊಂದನ್ನು ಬರೆದಿಟ್ಟು, ತಾನು ಆಧ್ಯಾತ್ಮಿಕ ಸಾಧನೆಗಾಗಿ ಹಿಮಾಲಯಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾಳೆ. ತಾನು ದೇವರ ರಕ್ಷಣೆಯಲ್ಲಿದ್ದು ತನ್ನ ಇರುವಿಕೆ ಬಗ್ಗೆ ಕುಟುಂಬ ಸದಸ್ಯರಿಗೆ ಇನ್ನೆಂದಿಗೂ ಮಾಹಿತಿ ದೊರೆಯುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಹಿಮಾಲಯಕ್ಕೆ ತೆರಳುವುದಕ್ಕೂ  ಮುನ್ನ ಹಾಸ್ಟೆಲ್ ನ ದಾಖಲಾತಿ ಪುಸ್ತಕದಲ್ಲಿ ತಾನು ಜ.20 ರಂದು ವಾಪಸ್ಸಾಗುವುದಾಗಿ ಬರೆದಿದ್ದಾಳೆ, ಹಾಸ್ಟೆಲ್ ನಿಂದ ಹೊರಟ ಯುವತಿ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಪೋಷಕರು ಐಐಟಿ ಆಡಳಿತಮಂಡಳಿಯವರಲ್ಲಿ ವಿಚಾರಿಸಿದ ವೇಳೆ ಯುವತಿ ಹಿಮಾಲಯಕ್ಕೆ ಹೋಗಿರುವ ಅಂಶ ಬಯಲಾಗಿದೆ. ಎಫ್ ಐಆರ್ ದಾಖಲಿಸಿರುವ ಪೊಲೀಸರು ಯುವತಿಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

SCROLL FOR NEXT