ಶನಿ ಸಿಂಗ್ನಾಪುರ ದೇವಾಲಯ 
ದೇಶ

ಹೆಲಿಕಾಪ್ಟರ್ ಮೂಲಕ ಶನಿ ದೇಗುಲಕ್ಕೆ ಮುತ್ತಿಗೆ: ಮಹಿಳಾ ಸಂಘಟನೆ ಎಚ್ಚರಿಕೆ

ಖ್ಯಾತ ಶನಿ ಸಿಂಗ್ನಾಪುರ ದೇವಾಲಯಕ್ಕೆ ಮಂಗಳವಾರ ಮುತ್ತಿಗೆ ಹಾಕುವುದಾಗಿ ಮಹಿಳಾ ಸಂಘಟನೆಯೊಂದು ಸೋಮವಾರ ಎಚ್ಚರಿಕೆ ನೀಡಿದೆ..

ಅಹಮದ್​ನಗರ (ಮಹಾರಾಷ್ಟ್ರ): ಖ್ಯಾತ ಶನಿ ಸಿಂಗ್ನಾಪುರ ದೇವಾಲಯಕ್ಕೆ ಮಂಗಳವಾರ ಮುತ್ತಿಗೆ ಹಾಕುವುದಾಗಿ ಮಹಿಳಾ ಸಂಘಟನೆಯೊಂದು ಸೋಮವಾರ ಎಚ್ಚರಿಕೆ ನೀಡಿದೆ. ಅಲ್ಲದೆ ಅಗತ್ಯ ಬಿದ್ದಲ್ಲಿ ಗರ್ಭ ಗುಡಿ ತೆರೆಯುವ ವೇಳೆಯಲ್ಲಿ ಹೆಲಿಕಾಪ್ಟರ್ ಮೂಲಕ ಬಂದು ದೇವಾಲಯ ಪ್ರವೇಶಿಸುವುದಾಗಿಯೂ ಬೆದರಿಕೆ ಹಾಕಿದೆ.
ಶನಿ ಸಿಂಗ್ನಾಪುರ ದೇವಾಲಯ ಪ್ರವೇಶಕ್ಕೆ ಮಹಿಳಾ ಭಕ್ತರಿಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದೆ. ಆದರೆ ಏನೇ ಆದರೂ ಶನಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತಾವು ದೇವಾಲಯ ಪ್ರವೇಶಿಸುವುದು ಖಚಿತ ಎಂದು ಭೂಮಾತಾ ರಣ್​ರಾಗಿಣಿ ಬ್ರಿಗೇಡ್ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರು ಹೇಳಿದ್ದಾರೆ.
ಈ ಸಂಬಂಧ ನಾವು ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದೇವೆ. ಬಯಲಿನ ಮೂಲಕ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡದೇ ಇದ್ದಲ್ಲಿ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಅದರಿಂದ ಏಣಿಗಳನ್ನು ಇಳಿಸಿ ದೇವಾಲಯಕ್ಕೆ ಇಳಿಯುತ್ತೇವೆ ಎಂದಿದ್ದಾರೆ.
ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆ ಇದಾಗಿರುವುದರಿಂದ ಯಾವುದೇ ಭದ್ರತಾ ವ್ಯವಸ್ಥೆಗೂ ನಾವು ಹೆದರುವುದಿಲ್ಲ. ಮಹಾರಾಷ್ಟ್ರ ರಾಜ್ಯದ ವಿವಿಧೆಡೆಗಳಿಂದ ಸುಮಾರು 1500 ಮಹಿಳೆಯರು ಮಂಗಳವಾರ ದೇವಾಲಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶನಿ ಸಿಂಗ್ನಾಪುರ ದೇವಾಲಯ ಅತ್ಯಂತ ವಿಶಿಷ್ಠ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಗೋಡೆಗಳಾಗಲೀ, ಛಾವಣಿಯಾಗಲೀ ಇಲ್ಲ. ಐದಡಿ ಎತ್ತರದ ಸ್ವಯಂಭೂ ಕರಿಯ ಶಿಲೆಯನ್ನು ಶನಿದೇವರ ರೂಪದಲ್ಲಿ ಇಲ್ಲಿ ಪ್ರಾರ್ಥಿಸಲಾಗುತ್ತದೆ. ಮಹಿಳೆಯರಿಗೆ ಇಲ್ಲಿ ತಲೆ ತಲಾಂತರದಿಂದ ಪ್ರವೇಶ ಇಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ