ಪಾಟ್ನಾ: ವೈದ್ಯರ ಮೇಲೆ ಶಾಸಕನ ಪುತ್ರನೊಬ್ಬ ಹಲ್ಲೆ ಮಾಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಬಿಹಾರದ ಶಾಸಕನ ಪುತ್ರನಾದ ರಂಜಿತ್ ಎಂಬುವವನ್ನು ನನ್ನ ಮೇಲೆ ವೀಲ್ ಚೇರ್ ನಲ್ಲಿ ಹಲ್ಲೆ ಮಾಡಿದ್ದು, ನನ್ನನ್ನು ಕೊಲ್ಲಲೆಂದೇ ಬಂದಿರುವಂತೆ ಕಾಣುತ್ತದೆ ಎಂದು ವೈದ್ಯ ಡಾ.ಸತ್ಯೇಂದ್ರ ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಶಾಸಕನ ಪುತ್ರ ರಂಜಿತ್ ವಿರೋಧಿ ರಾಜಕಾರಣಿಯೊಬ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಈತ ತನ್ನ ಎಂಟು ಸಹಚರರೊಂದಿಗೆ ಆಸ್ಪತ್ರೆಗೆ ಆಗಮಿಸಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾನೆ. ವೈದ್ಯರ ಹೇಳಿಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.