100 ಮರಳು ರಥ 
ದೇಶ

ರಥೋತ್ಸವ ಮುನ್ನಾದಿನ 100 ಮರಳಿನ ರಥ ನಿರ್ಮಿಸಿದ ಪಟ್ನಾಯಕ್

ಓಡಿಶಾದ ಪುರಿ ಜಗನ್ನಾಥನ ರಥೋತ್ಸವದ ಮುನ್ನಾದಿನ ಖ್ಯಾತ ಮರುಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ...

ಭುವನೇಶ್ವರ: ಓಡಿಶಾದ ಪುರಿ ಜಗನ್ನಾಥ ರಥೋತ್ಸವದ ಮುನ್ನಾದಿನ ಖ್ಯಾತ ಮರುಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಹತ್ತಿರದ ಬೀಚ್​ನಲ್ಲಿ ತಮ್ಮ 25 ಜನ ವಿದ್ಯಾರ್ಥಿಗಳೊಂದಿಗೆ 100 ಮರಳಿನ ರಥ ನಿರ್ಮಿಸಿ ಗಮನ ಸೆಳೆದಿದ್ದಾರೆ.
ಪುರಿ ಜಗನ್ನಾಥನ ಜಗತ್​ಪ್ರಸಿದ್ಧ ಕಟ್ಟಿಗೆಯ ರಥಯಾತ್ರೆ ನೋಡಲು ಬಂದ ಭಕ್ತ ಸಮೂಹಕ್ಕೆ ಮರುಳು ರಥಗಳು ಆಕರ್ಷಿಸಿದವು. ಶುಕ್ರವಾರದಿಂದ ರಥ ನಿರ್ವಿುಸುವ ಕಾರ್ಯ ಆರಂಭಿಸಿದ ಪಟ್ನಾಯಕ್ ಮತ್ತು ತಂಡ ಮಂಗಳವಾರ ಮದ್ಯಾಹ್ನದ ವೇಳೆಗೆ 100 ರಥಗಳನ್ನು ನಿರ್ಮಿಸಿದ್ದಾರೆ.
ಓಡಿಶಾ ಪ್ರವಾಸೋದ್ಯಮದ ಸಚಿವ ಅಶೋಕ್ ಚಂದ್ರ ಪಂಡಾ ಅವರು ಇಂದು ಮರುಳು ರಥಗಳನ್ನು ಉದ್ಘಾಟಿಸಿದರು.
ಪಟ್ನಾಯಕ್ ಮತ್ತು ಅವರ ತಂಡ 800 ಮರುಳು ಚೀಲಗಳಲ್ಲಿ 20 ತಾಸು ಕೆಲಸ ಮಾಡಿ ಈ ಸಾಧನೆ ಮಾಡಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿರುವ ಪಟ್ನಾಯಕ್ ಈಗಾಗಲೇ ಲಿಮ್ಕಾ ಬುಕ್​ನಲ್ಲಿ 20 ಬಾರಿ ಪ್ರವೇಶ ಗಿಟ್ಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT