ದೇಶ

ಇನ್ನೇನು ರೈಲು ಗುದ್ದೆ ಬಿಡ್ತು ಎನ್ನುವಷ್ಠರಲ್ಲಿ ಸೇತುವೆಯಿಂದ ನದಿಗೆ ಜಿಗಿದ ಮಕ್ಕಳು!

Vishwanath S
ಘಾಜಿಯಾಬಾದ್: ಪ್ರಾಣದ ಜತೆಗೆ ಮಕ್ಕಳು ಚಲ್ಲಾಟವಾಡಿರುವ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ. ಸೇತುವೆ ಮೇಲೆ ನಿಂತು ಇನ್ನೇನು ರೈಲು ಗುದ್ದಬೇಕೆನ್ನುವಷ್ಟರಲ್ಲಿ ಮಕ್ಕಳು ಸಾಲಾಗಿ ನದಿಗೆ ಹಾರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ಹಿಂದೊನ್ ನದಿ ಮೇಲೆ ಸೇತುವೆ ನಿರ್ಮಾಣ ಮಾಡಿ ರೈಲ್ವೆ ಹಳಿ ನಿರ್ಮಿಸಲಾಗಿದೆ. ಅದರ ಮೇಲೆ ನಿಂತ ಎಳೆಂಟು ಮಕ್ಕಳು ರೈಲು ಬರುತ್ತಿದ್ದಂತೆ ಸೇತುವೆ ಮೇಲಿಂದ ಒಬ್ಬೊಬ್ಬರಾಗಿ ನದಿಗೆ ಹಾರುತ್ತಾರೆ. ಈ ವೇಳೆ ಸ್ವಲ್ಪ ಯಾಮಾರಿದರು ಸಾವು ಕಟ್ಟಿಟ್ಟಬುತ್ತಿ. 
ಇಲ್ಲಿ ಪ್ರತಿದಿನ ಸ್ನಾನಕ್ಕೆ ಬರುವ ಮಕ್ಕಳು ಇಲ್ಲಿ ರೈಲು ಬರುತ್ತಿದ್ದಂತೆ ನೀರಿಗೆ ಹಾರುವ ದುಸ್ಸಾಹಸ ಮಾಡುವುದು ಸರ್ವೇ ಸಾಮಾನ್ಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 
SCROLL FOR NEXT