ಸಾಂದರ್ಭಿಕ ಚಿತ್ರ 
ದೇಶ

ಗ್ಯಾಂಗ್ ರೇಪ್ ಸಂತ್ರಸ್ತೆ ಮೇಲೆ ಮತ್ತದೇ ಗ್ಯಾಂಗ್ ನಿಂದ ಸಾಮೂಹಿಕ ಅತ್ಯಾಚಾರ

3 ವರ್ಷಗಳ ಹಿಂದೆ ಕಾಮುಕ ಪಡೆಯೊಂದರಿಂದ ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಯುವತಿಯೊಬ್ಬಳು ಇದೀಗ ಮತ್ತದೇ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಭೀಕರ ಘಟನೆ ಹರ್ಯಾಣದಲ್ಲಿ ನಡೆದಿದೆ..

ರೋಹ್ಟಕ್: 3 ವರ್ಷಗಳ ಹಿಂದೆ ಕಾಮುಕ ಪಡೆಯೊಂದರಿಂದ ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಯುವತಿಯೊಬ್ಬಳು ಇದೀಗ ಮತ್ತದೇ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಭೀಕರ  ಘಟನೆ ಹರ್ಯಾಣದಲ್ಲಿ ನಡೆದಿದೆ.

ರಾಷ್ಟ್ರರಾಜಧಾನಿ ದೆಹಲಿಯಿಂದ ಕೇವಲ 60 ಕಿ.ಮೀ ದೂರದಲ್ಲಿರುವ ರೋಹ್ಟಕ್ ನಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೇ ತಮ್ಮ ವಿರುದ್ಧ ದೂರು ನೀಡಿದ್ದಕ್ಕೇ ಮತ್ತೆ  ಅತ್ಯಾಚಾರ ಮಾಡುವ ಮೂಲಕ ಸೇಡು ತೀರಿಸಿಕೊಂಡಿರುವುದಾಗಿ ಲಜ್ಜೆಗೇಡಿ ಮಾತುಗಳನ್ನಾಡಿದ್ದಾರೆ. ಎರಡನೇ ಬಾರಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಯುವತಿ ಹೇಳಿರುವಂತೆ, ಆಕೆ  ಕಾಲೇಜು ಮುಗಿಸಿ ಹೊರಗೆ ಬಂದಾಗ ತನ್ನ ಮೇಲೆ ಈ ಹಿಂದೆ ಅತ್ಯಾಚಾರ ಮಾಡಿದ್ದ ಐವರು ಇದ್ದರು. ಕಾಲೇಜಿನ ಗೇಟ್ ಬಳಿ ಕಾರಿನ ಒಳಗೆ ಮೂವರು ಮತ್ತು ಕಾರಿನ ಹೊರಗೆ ಇದ್ದ ಇಬ್ಬರು  ನಾನು ಹೊರಗೆ ಬರುತ್ತಿದ್ದಂತೆಯೇ ಕಾರಿನೊಳಗೆ ನನ್ನನ್ನು ಬಲವಂತವಾಗಿ ಕೂರಿಸಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಮಾಡಿದರು.

ಬಳಿಕ ನಾನು ಪ್ರಜ್ಞಾಹೀನಳಾದೆ. ನಂತರ ನನ್ನನ್ನು ಕಾರಿನಲ್ಲಿ ಹಾಕಿಕೊಂಡು ಕುರುಚಲು ಗಿಡಗಳಿರುವ ಪ್ರದೇಶದಲ್ಲಿ ಎಸೆದರು ಎಂದು ಹೇಳಿದ್ದಾಳೆ.

2013ರಲ್ಲಿ ಇದೇ ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ಥೆ
ಈ ಹಿಂದೆ ಅಂದರೆ 2013ರಲ್ಲಿ ಇದೇ ಕಾಮುಕರಿಂದ ಯುವತಿ ಅತ್ಯಾಚಾರಕ್ಕೊಳಗಾಗಿದ್ದಳು. ಆಗ ಈಕೆ ದೂರು ನೀಡಿ ಎಲ್ಲ ಐದೂ ಕಾಮುಕರನ್ನು ಜೈಲಿಗೆ ಕಳುಹಿಸಿದ್ದಳು. ಈ ಮಧ್ಯೆ ಕಾಮುಕ  ಯುವಕರ ಹಿರಿಯರು ಯುವತಿ ಕುಂಟುಂಬಕ್ಕೆ 50 ಲಕ್ಷ ನೀಡಿ ಪ್ರಕರಣ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದರು. ಬಳಿಕ ಯುವತಿ ಕುಟುಂಬ ತಮ್ಮ ಸ್ವಗ್ರಾಮ ಭಿವಾನಿಯಿಂದ ರೋಹ್ಟಕ್ ಗೆ  ಸ್ಥಳಾಂತರವಾಗಿತ್ತು. ಈ ನಡುವೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಾಮುಕರು ಮತ್ತೆ ಆಕೆಯನ್ನು ಅಪಹರಿಸಿ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ.

ಪ್ರಕರಣ ದಾಖಸಿಕೊಂಡಿರುವ ಹರ್ಯಾಣ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಸ್ತುತ ಈ ಎಲ್ಲಾ ಐದೂ ಕಾಮುಕರ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT