ರಾಖಿ ಸಾವಂತ್ 
ದೇಶ

ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಿರಿ: ನವಾಜ್ ಷರೀಫ್ ಗೆ ರಾಖಿ ಸಾವಂತ್ ಪಾಠ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಪಾಠಕಲಿತುಕೊಳ್ಳಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಂದೇಶ ರವಾನಿಸಿದ್ದಾರೆ...

ಮುಂಬಯಿ: ಪಾಕ್ ರೂಪದರ್ಶಿ ಹಾಗೂ ನಟಿ ಕಂದೀಲ್ ಬಲೂಚ್ ಹತ್ಯೆ ಪ್ರಕರಣ ಸಂಬಂಧ ಬಾಲಿವುಡ್​ನ ವಿವಾದಾತ್ಮಕ  ನಟಿ ರಾಕಿ ಸಾವಂತ್ ಪ್ರತಿಕ್ರಿಯಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಪಾಠಕಲಿತುಕೊಳ್ಳಿ  ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಂದೇಶ ರವಾನಿಸಿದ್ದಾರೆ.

ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದುಬನ್ನು ಮೋದಿಯವ ಬೇಟಿ ಬಚಾವೋ ಮೂಲಕ ಕಲಿತುಕೊಳ್ಳಿ ಎಂದು ರಾಖಿ ಸಾವಂತ್ ಕಿಡಿಕಾರಿದ್ದಾರೆ. ನಮ್ಮ ದೇಶ ಬೇಟಿ ಬಚಾವೋ ಎಂದು ಹೇಳುತ್ತಿದ್ದಾರೆ, ಪಾಕಿಸ್ತಾನ ಬೇಟಿ ಹಠಾವೋ ಎನ್ನುತ್ತಿದೆ, ಇದಕ್ಕೆ ಕಂದೀಲ್ ಬಲೂಚ್ ಅವರ ಹತ್ಯೆಯೇ ಸಾಕ್ಷಿ. ದಯವಿಟ್ಟು ಷರೀಫ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಬೇಕೆಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಬೇಟಿ ಬಚಾವೋ ಆಂದೋಲನಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಋಣಿಯಾಗಿದ್ದೇನೆ. ಬೇಟಿ ಬಚಾವೋ ಎಂಬುದನ್ನು ಕೇವಲ ಧ್ಯೇಯ ವಾಕ್ಯವನ್ನಾಗಿ ಇಟ್ಟುಕೊಳ್ಳದೇ ಅದನ್ನು ಅನುಷ್ಠಾನ ಮಾಡಲು ಕಾನೂನು ತರಲು ಮೋದಿ ಹೊರಟಿದ್ದಾರೆ. ಈ ಮೂಲಕ ದೇಶದ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್