ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ(ಸಂಗ್ರಹ ಚಿತ್ರ) 
ದೇಶ

ಪೀಟರ್ ಮುಖರ್ಜಿಗೆ ಪಾರ್ಟಿ ಮತ್ತು ಮಹಿಳೆಯರ ಮೇಲೆ ಅಪಾರ ಹುಚ್ಚು: ಶಬ್ನಮ್

ಮಾಜಿ ಮಾಧ್ಯಮ ದೊರೆ ಮತ್ತು ಶೀನಾ ಬೋರಾ ಹತ್ಯೆಯ ಆರೋಪಿ ಪೀಟರ್ ಮುಖರ್ಜಿಗೆ ಯಾವುದೇ ನೈತಿಕತೆ...

ಮುಂಬೈ: ಮಾಜಿ ಮಾಧ್ಯಮ ದೊರೆ ಮತ್ತು ಶೀನಾ ಬೋರಾ ಹತ್ಯೆಯ ಆರೋಪಿ ಪೀಟರ್ ಮುಖರ್ಜಿಗೆ ಯಾವುದೇ ನೈತಿಕತೆ ಇರಲಿಲ್ಲ, ಆತನ ಜೀವನದಲ್ಲಿ ಅನೇಕ ಮಹಿಳೆಯರಿದ್ದರು ಎಂದು ಪೀಟರ್ ಮುಖರ್ಜಿಯ ಮಾಜಿ ಪತ್ನಿ ಶಬ್ನಮ್ ಹೇಳಿದ್ದಾರೆ.
''ಪೀಟರ್ ಗೆ ಯಾವುದೇ ನೈತಿಕತೆ ಇರಲಿಲ್ಲ. ಯಾವಾಗಲೂ ಯುವ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದ. ತಡರಾತ್ರಿಯ ಪಾರ್ಟಿಗಳಿಗೆ ಹೋಗುವುದು ಆತನಿಗೆ ಬಹಳ ಇಷ್ಟವಾಗಿತ್ತು. ಮತ್ತು ಆತನ ಜೀವನದಲ್ಲಿ ಅನೇಕ ಮಹಿಳೆಯರು ಬಂದು ಹೋಗಿದ್ದರು. ಇದೊಂದೇ ಕಾರಣದಿಂದ ನಾನು ಆತನಿಂದ ವೈವಾಹಿಕ ಸಂಬಂಧವನ್ನು ಮುರಿದುಕೊಂಡೆ'' ಎಂದು ಪೀಟರ್ ನ ಮೊದಲ ಪತ್ನಿ ಶಬ್ನಮ್ ತಿಳಿಸಿದ್ದಾರೆ. 
ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ ಶೀನಾ ಬೋರಾಳನ್ನು ಹತ್ಯೆ ಮಾಡಲು ಪಿತೂರಿ ನಡೆಸಿದ್ದರು ಎಂದು ತನಿಖೆ ನಡೆಸಿ ಹೇಳಿಕೆ ನೀಡಿದ್ದ ಸಿಬಿಐ ನಿನ್ನೆ ಪೀಟರ್ ನ ಮೊದಲ ಪತ್ನಿ ಶಬ್ನಮ್ ನ ಹೇಳಿಕೆಯನ್ನು ಬಹಿರಂಗಪಡಿಸಿದೆ.
ಶಬ್ನಮ್ ನ ಹೇಳಿಕೆಯನ್ನು ಸಿಬಿಐ ರಹಸ್ಯವಾಗಿ ಕಳೆದ ವರ್ಷ ನವೆಂಬರ್ 25ರಂದು ರೆಕಾರ್ಡ್ ಮಾಡಿಕೊಂಡಿತ್ತು. ಆಕೆಯ ಹೇಳಿಕೆಯ ಒಂದು ಭಾಗವನ್ನು ಮಾತ್ರ ಬಹಿರಂಗಪಡಿಸಲಾಗಿದ್ದು, ಇನ್ನೊಂದು ಭಾಗ ಹಾಗೆಯೇ ಇದೆ. 
ಶಬ್ಮಮ್ ತಮ್ಮ ಹೇಳಿಕೆಯಲ್ಲಿ, ಪೀಟರ್ ಗೆ ಯುವತಿಯರ ಮೇಲೆ ಅಪಾರ ಒಲವು ಇತ್ತು. ತಡರಾತ್ರಿಯ ಪಾರ್ಟಿಗೆ ಹೋಗುವುದು, ಹಲವು ಮಹಿಳೆಯರ ಜೊತೆ ಸಹವಾಸವೂ ಇತ್ತು. ಇದರಿಂದಾಗಿ ಆತನೊಂದಿಗೆ ಜೀವನ ನಡೆಸಲು ಸಾಧ್ಯವಾಗದೆ ವಿಚ್ಛೇದನ ನೀಡಿದೆ ಎಂದು ಹೇಳಿದ್ದಾರೆ.
 ಶಬ್ನಮ್ ಹೇಳಿಕೆ ಜೊತೆಗೆ ಶೀನಾ ಬೋರಾ ಹತ್ಯೆಯ ಎಲ್ಲಾ ಆರೋಪಿಗಳ ಕುರಿತು ಸಿಬಿಐ ಈ ಹಿಂದೆ ಆರೋಪಪಟ್ಟಿ ಸಲ್ಲಿಸಿತ್ತು. ಈ ಹೇಳಿಕೆಯನ್ನೀಗ ರಕ್ಷಣಾ ವಕೀಲರಿಗೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!