ಸುಟ್ಟು ಹಾಕಲ್ಪಟ್ಟ ನಾಯಿಗಳನ್ನು ಅಂಜನಾದ್ರಿ ಲೇ ಔಟ್ ನಲ್ಲಿ ರಕ್ಷಿಸಿದ ಪ್ರಾಣಿದಯಾ ಸಂಘದ ಕಾರ್ಯಕರ್ತರು. 
ದೇಶ

22 ನಾಯಿಗಳ ಮಾರಣಹೋಮ ಮಾಡಿ ಗುಂಡಿಗೆ ಎಸೆದ ದುಷ್ಕರ್ಮಿಗಳು

ಅಂಜನಾಪುರ ಹತ್ತಿರ ಅಮೃತಮಹಲ್ ನಲ್ಲಿ ಮೂರು ದಿನಗಳ ಹಿಂದೆ ಗುಂಡಿಯೊಂದರಲ್ಲಿ 22 ಸತ್ತ ನಾಯಿಗಳು...

ಬೆಂಗಳೂರು: ಅಂಜನಾಪುರ ಹತ್ತಿರ ಅಮೃತಮಹಲ್ ನಲ್ಲಿ ಮೂರು ದಿನಗಳ ಹಿಂದೆ ಗುಂಡಿಯೊಂದರಲ್ಲಿ 22 ಸತ್ತ ನಾಯಿಗಳು ಪತ್ತೆಯಾಗಿದ್ದವು. ಬೇರೆಲ್ಲಿಯೋ ನಾಯಿಗಳನ್ನು ಕೊಂದು ಇಲ್ಲಿ ಗುಂಡಿಯಲ್ಲಿ ಹೂತು ಹಾಕಿರಬೇಕು. ಸ್ಥಳೀಯರು ನಾಯಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲದಿರುವುದರಿಂದ ಕೊಂದವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಪೀಪಲ್ಸ್ ಫಾರ್ ಎನಿಮಲ್ಸ್(ಪಿಎಫ್ಎ) ಎಂಬ ಪ್ರಾಣಿದಯಾ ಸಂಘಟನೆಯ ಅಧಿಕಾರಿ ಶರತ್ ಲಾಲ್ ಅವರಿಗೆ ಮೊನ್ನೆ ಗುರುವಾರ ಒಂದು ದೂರವಾಣಿ ಕರೆ ಬಂತು. ಆಗ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಆಗ ಗುಂಡಿಯಲ್ಲಿ ಸುಮಾರು 30 ನಾಯಿಗಳನ್ನು ಹೂತಿರುವುದು ಪತ್ತೆಯಾಯಿತು. ಕೂಡಲೇ ಅವುಗಳನ್ನು ಹೊರತೆಗೆದು ಕೋರಮಂಗಲದಲ್ಲಿರುವ ಕಾರ್ಟ್ ಮನ್ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿದರು. ಉಳಿದ ನಾಯಿಗಳು ಸತ್ತು ಹೋಗಿದ್ದವು ಎನ್ನುತ್ತಾರೆ ಶರತ್ ಲಾಲ್.
ನಾಯಿಗಳು ಆರೋಗ್ಯವಂತವಾಗಿ ಕಂಡುಬರುತ್ತಿದ್ದು, ಸಾವಿಗೆ ನಿಖರ ಕಾರಣವೇನೆಂದು ತಿಳಿದುಬರುತ್ತಿಲ್ಲ ಎನ್ನುತ್ತಾರೆ ಶರತ್.ಈ ಸಂಬಂಧ ಎಫ್ ಐಆರ್ ದಾಖಲಿಸಿದ್ದೇವೆ ಎನ್ನುತ್ತಾರೆ ದಕ್ಷಿಣ ವಲಯ ಡಿಸಿಪಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT