ದೇಶ

ಕಾಶ್ಮೀರದ ಮುಗ್ಧ ಜನರನ್ನು ಕೊಲ್ಲಲು ಬಂದೆ: ಬಂಧಿತ ಪಾಕ್ ಉಗ್ರನಿಂದ ಆಘಾತಕಾರಿ ಮಾಹಿತಿ

Shilpa D

ಶ್ರೀನಗರ: ಕಾಶ್ಮೀರದ ಮುಗ್ಧ ನಾಗರಿಕರನ್ನು ಕೊಲ್ಲಲು ಭಾರತಕ್ಕೆ ಬಂದಿದ್ದಾಗಿ ಪಾಕಿಸ್ತಾನಿ ಉಗ್ರ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ಕಾಶ್ಮೀರದ ಕುಪ್ವಾರದಲ್ಲಿ ಗಡಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಉಗ್ರ ಬಹದ್ದೂರ್ ಅಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.

ಈತನನ್ನು ರಾಷ್ಟ್ರೀಯ ತನಿಖಾ ದಳ ತೀವ್ರ ವಿಚಾರಣೆ ನಡೆಸಿದಾಗ ಕಾಶ್ಮೀರದ ಜನರನ್ನು ಕೊಲ್ಲಲು ಬಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.

22 ವರ್ಷದ ಅಲಿ ಲಷ್ಕರ್-ಇ -ತಯ್ಬಾ ಸಂಘಟನೆಯಿಂದ ಗೆರಿಲ್ಲಾ ಯುದ್ದ ತರಬೇತಿ ಪಡೆದುಕೊಂಡಿದ್ದಾನೆ. ಬಂಧಿತ ವ್ಯಕ್ತಿ ಪಾಕಿಸ್ತಾನ ಪ್ರಜೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟ ಪಡಿಸಿದೆ.

SCROLL FOR NEXT