ಕಳೆದ ವಾರ ಪಾಲಿಕೆಯ ಧ್ವಂಸ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ಮುಸಲ್ಮಾನರು. 
ದೇಶ

ವಡೋದರ: ಮುಸ್ಲಿಮರು ತಮ್ಮ ವಾಸ ಪ್ರದೇಶಕ್ಕೆ ಬರದಂತೆ ಮನವಿ ಸಲ್ಲಿಸಿದ ನಿವಾಸಿಗಳು

ನಗರಪಾಲಿಕೆಯ ಸುಲೇಮಾನ್‌ ಕೊಳೆಗೇರಿ ಧ್ವಂಸ ಕಾರ್ಯಾಚರಣೆಯಿಂದ ವಸತಿ ಕಳೆದುಕೊಂಡಿರುವ ಸುಮಾರು 300...

ನವದೆಹಲಿ: ನಗರಪಾಲಿಕೆಯ ಸುಲೇಮಾನ್‌ ಕೊಳೆಗೇರಿ ಧ್ವಂಸ ಕಾರ್ಯಾಚರಣೆಯಿಂದ ವಸತಿ ಕಳೆದುಕೊಂಡಿರುವ ಸುಮಾರು 300 ಮುಸ್ಲಿಂ ಕುಟುಂಬಗಳನ್ನು ತಮ್ಮ ಪ್ರದೇಶಕ್ಕೆ ಸ್ಥಳಾಂತರಿಸಕೂಡದು ಎಂದು ಗುಜರಾತ್‌ನ ವಡೋದರ ಸಮೀಪದ ಕಪುರಾಯಿ ನಿವಾಸಿಗಳು  ಒತ್ತಾಯಿಸಿದ್ದಾರೆ. ಈ ಕುರಿತು ವಡೋದರ ನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.

ಮುಸ್ಲಿಮರನ್ನು ತಮ್ಮ ಪ್ರದೇಶಕ್ಕೆ ಸ್ಥಳಾಂತರಿಸಿದಲ್ಲಿ ಇಲ್ಲಿನ ಶಾಂತಿಪ್ರಿಯ ಪರಿಸರ ಹಾಳಾಗುವುದೆಂಬ ಭೀತಿಯನ್ನು ಕಪುರಾಯಿ ಪ್ರದೇಶದ ನಿವಾಸಿಗಳು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರ ದೈನಂದಿನ ಚಟುವಟಿಕೆಗಳು ಹಿಂಸೆ, ಹಲ್ಲೆ, ಜಗಳ ಇತ್ಯಾದಿಗಳಿಂದ ಕೂಡಿವೆ ಎಂದವರು ಆಪಾದಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ವಾರ ಕೊಳೆಗೇರಿ ಮುಕ್ತ ವಡೋದರ ಅಭಿಯಾನದ ಅಂಗವಾಗಿ ನಗರಪಾಲಿಕೆ ಸುಲೇಮಾನ್‌ ಚಾಲ್‌ನ ಸುಮಾರು 300 ಮುಸ್ಲಿಂ ಕುಟುಂಬಗಳ ಗುಡಿಸಲುಗಳನ್ನು ಧ್ವಂಸಗೊಳಿಸಿತ್ತು.

ಕಾರ್ಯಾಚರಣೆಯಿಂದ ಆಕ್ರೋಶಿತರಾಗಿದ್ದ ಮುಸಲ್ಮಾನರು ಪ್ರತಿಭಟನೆಗಿಳಿದು ಪೊಲೀಸ್‌ ಚೌಕಿ, ಸಿಟಿ ಬಸ್ಸು ಮತ್ತು ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಿದ್ದರು. ಈ ಹಿಂಸೆಯನ್ನು ಹತ್ತಿಕ್ಕಲು ಪೊಲೀಸರು ಬಲಪ್ರಯೋಗ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT