ಸಾಂದರ್ಭಿಕ ಚಿತ್ರ 
ದೇಶ

ಭಾರತದಲ್ಲಿ 2020ರ ವೇಳೆಗೆ 52 ಲಕ್ಷ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪಾದನೆ: ಅಧ್ಯಯನ

ಇ-ತ್ಯಾಜ್ಯದಲ್ಲಿ ವಿಶ್ವದಲ್ಲಿಯೇ ಭಾರತ 5ನೇ ಸ್ಥಾನದಲ್ಲಿದ್ದು, 2020ರ ವೇಳೆಗೆ 52 ಲಕ್ಷ ಮೆಟ್ರಿಕ್ ಟನ್ ಎಲೆಕ್ಟ್ರಾನಿಕ್ ...

ಮುಂಬೈ: ಇ-ತ್ಯಾಜ್ಯದಲ್ಲಿ ವಿಶ್ವದಲ್ಲಿಯೇ ಭಾರತ 5ನೇ ಸ್ಥಾನದಲ್ಲಿದ್ದು, 2020ರ ವೇಳೆಗೆ 52 ಲಕ್ಷ ಮೆಟ್ರಿಕ್ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಉತ್ಪಾದಿಸುವ ಗುರಿ ಹೊಂದಿದೆ. ನಮ್ಮ ದೇಶದಲ್ಲಿ ಪ್ರಸ್ತುತ 18 ಲಕ್ಷ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಭಾರತದ ಇ-ತ್ಯಾಜ್ಯ ವಾರ್ಷಿಕವಾಗಿ ಶೇಕಡಾ 30ರಷ್ಟು ಹೆಚ್ಚಾಗುತ್ತಿದೆ ಎಂದು ಅಸ್ಸೋಚಮ್ -ಸಿಕಿನೆಟಿಕ್ಸ್ ಅಧ್ಯಯನ ತಿಳಿಸಿದೆ.

2018ರ ವೇಳೆಗೆ ವಿಶ್ವದಲ್ಲಿ 130 ದಶಲಕ್ಷ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಭಾರತೀಯರು ಶ್ರೀಮಂತರಾಗುತ್ತಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಖರೀದಿಗೆ, ಕಂಪ್ಯೂಟರ್ ಸಾಧನಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಾರೆ. ನಂತರ ದೂರಸಂಪರ್ಕ ಸಾಧನಗಳು, ವಿದ್ಯುತ್ ಉಪಕರಣಗಳು ಮತ್ತು ವೈದ್ಯಕೀಯ ಸಾಧನಗಳಿಗೂ ಕೂಡ ಖರ್ಚು ಮಾಡುತ್ತಾರೆ. ಗೃಹೋಪಯೋಗಿ ಉತ್ಪನ್ನಗಳ ತ್ಯಾಜ್ಯ ಶೇಕಡಾ 4ರಷ್ಟಿದೆ.

ದೇಶದ ಒಟ್ಟು ಇ-ತ್ಯಾಜ್ಯಗಳಲ್ಲಿ ಶೇಕಡಾ 1.5ರಷ್ಟು ಮಾತ್ರ ಮರುಬಳಕೆ ಮಾಡಲಾಗುತ್ತದೆ. ಇದಕ್ಕೆ ಮೂಲಸೌಕರ್ಯ ಕೊರತೆ, ಕಾನೂನು, ಸರ್ಕಾರದ ಆಡಳಿತ ಕಾರಣವಾಗಿದೆ.
ಇ-ತ್ಯಾಜ್ಯವೆಂದರೆ ತಿರಸ್ಕರಿಸಲ್ಪಟ್ಟ ಕಂಪ್ಯೂಟರ್ ಮಾನಿಟರ್, ಮದರ್ ಬೋರ್ಡ್, ಕ್ಯಾಥೋಡ್ ರೇ ಟ್ಯೂಬ್, ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್, ಮೊಬೈಲ್ ಫೋನ್, ಚಾರ್ಜರ್, ಕಂಪ್ಯೂಟರ್ ಡಿಸ್ಕ್, ಹೆಡ್ ಫೋನ್, ವೈಟ್ ಗೂಡ್ಸ್(ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇಸ್, ಪ್ಲಾಸ್ಮಾ ಟೆಲಿವಿಷನ್, ಏರ್ ಕಂಡೀಷನರ್ಸ್, ರೆಫ್ರಿಜರೇಟರ್ ಇತ್ಯಾದಿಗಳು.

ಇ-ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಅದರಿಂದ ಹೊರಸೂಸುವ ರಾಸಾಯನಿಕಗಳು ಮಣ್ಣಿಗೆ ಮತ್ತು ಮನುಷ್ಯನ ಆರೋಗ್ಯಕ್ಕೂ ಹಾನಿಯನ್ನುಂಟುಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಇ-ತ್ಯಾಜ್ಯ ಘಟಕಗಳಲ್ಲಿ ಕೆಲಸ ಮಾಡುವವರು ಉಸಿರಾಟದ ತೊಂದರೆ, ತುರಿಕೆ, ಕಫ ಮತ್ತು ಗಂಟಲು ಹಿಸುಕುವಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT