ಆರ್ ಬಿ ಐ ಗೌರ್ನರ್ ರಘುರಾಮ್ ರಾಜನ್ 
ದೇಶ

ಬಡತನ ನಿವಾರಣೆಗೆ ಭಾರತೀಯರ ತಲಾ ಆದಾಯ 6 ಸಾವಿರ ಡಾಲರ್‌ ಆಗಬೇಕು: ರಘುರಾಮ್ ರಾಜನ್‌

ದೇಶದಲ್ಲಿನ ಬಡತನ ನಿವಾರಣೆಯಾಗಬೇಕಾದರೆ ನಮ್ಮ ಆರ್ಥಿಕತೆಯು 6,000 ದಿಂದ 7,000 ಡಾಲರ್‌ ತಲಾ ಆದಾಯದ...

ನವದೆಹಲಿ: ದೇಶದಲ್ಲಿನ ಬಡತನ ನಿವಾರಣೆಯಾಗಬೇಕಾದರೆ ನಮ್ಮ ಆರ್ಥಿಕತೆಯು 6,000 ದಿಂದ 7,000 ಡಾಲರ್‌ ತಲಾ ಆದಾಯದ ಆರ್ಥಿಕತೆಯಾಗಿ ಅಭಿವೃದ್ದಿ ಹೊಂದಬೇಕು. ಈ ಗುರಿಯನ್ನು ತಲುಪಬೇಕಾದರೆ ಇನ್ನು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಬೇಕಾಗಿದೆ ಎಂದು ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ಹೇಳಿದ್ದಾರೆ.

ಆರ್‌ಬಿಐ ಗವರ್ನರ್‌ ಆಗಿ ರಘುರಾಮ ರಾಜನ್‌ ಅವರ ಮೂರು ವರ್ಷಗಳ ಅಧಿಕಾರಾವಧಿ ಮುಗಿಯಲು ಇನ್ನು ಕೇವಲ ಮೂರು ತಿಂಗಳು ಬಾಕಿಯಿದೆ.

ರಾಜನ್‌ ಅವರನ್ನು ಮೋದಿ ಸರಕಾರ ಎರಡನೇ ಅವಧಿಗೆ ಆರ್‌ಬಿಐ ಗವರ್ನರ್‌ ಆಗಿ ಮುಂದುವರಿಸುತ್ತದೇ ಇಲ್ಲವೇ,ಅಥವಾ ಸ್ವತಃ ರಾಜನ್‌ ಮುಂದುವರಿಯಲು ಬಯಸುತ್ತಾರೆಯೇ ಇಲ್ಲವೇ ಎಂಬುದೀಗ ಕುತೂಹಲವಾಗಿ ಉಳಿದಿದೆ.

ಭಾರತದಂತೆ ಸಿಂಗಾಪುರ ಕೂಡ ಒಂದು ಕಾಲಘಟ್ಟದಲ್ಲಿ ಕೇವಲ 1,500 ಡಾಲರ್‌ ತಲಾ ಆದಾಯದ ದೇಶವಾಗಿತ್ತು. ಇವತ್ತು ಸಿಂಗಾಪುರದ ತಲಾ ಆದಾಯ 50,000 ಡಾಲರ್‌ ! ನಾವಿನ್ನೂ 1,500 ಡಾಲರ್‌ ತಲಾ ಆದಾಯದ ಆರ್ಥಿಕತೆಯಾಗಿಯೇ ಉಳಿದಿದ್ದೇವೆ. ನಮ್ಮ ದೇಶದಲ್ಲಿ ವಿಪರೀತವಾದ ದಾರಿದ್ರ್ಯವಿದೆ. ಇದನ್ನು ಹೋಗಲಾಡಿಸಲು ನಾವು ನಮ್ಮ ದೇಶದ ಆರ್ಥಿಕತೆಯನ್ನು ತಲಾ 6,000 ದಿಂದ 7,000 ಡಾಲರ್‌ ಆದಾಯದ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಇದಕ್ಕೆ ಏನಿಲ್ಲವೆಂದರೂ ನಾವು ಮುಂದಿನ 20 ವರ್ಷಗಳ ಕಾಲ ಸತತವಾಗಿ ಅವಿರತವಾಗಿ ಪ್ರಯತ್ನಿಸಬೇಕು; ರಾಷ್ಟ್ರೀಯ ಆದಾಯದ ಸಮಾನ ಹಂಚಿಕೆಗೆ ನಾವು ಆದ್ಯತೆ ನೀಡಬೇಕು ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

KPCC ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ?: ದೆಹಲಿಯಲ್ಲಿ ಸಿಡಿದೆದ್ದ ಡಿಸಿಎಂ ಡಿ.ಕೆ ಶಿವಕುಮಾರ್!

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ ಅಸ್ಸಾಂ ಬಿಜೆಪಿ ಸಚಿವ!: ಮುಸ್ಲಿಮ್ ನರಮೇಧ ನೆನಪಿಸಿದ್ದಕ್ಕೆ ಕಾಂಗ್ರೆಸ್ ಕೆಂಡ!

ಕುಟುಂಬದ ಮೇಲೆ ದಾಳಿ ಮಾಡುವವರನ್ನು...: ಸಹೋದರಿ ರೋಹಿಣಿಗೆ ಆದ ಅಪಮಾನಕ್ಕೆ ಸಿಡಿದ ತೇಜ್ ಪ್ರತಾಪ್ ಯಾದವ್; ತಂದೆ ಲಾಲು ಪ್ರಸಾದ್ ಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!

SCROLL FOR NEXT