ಕಾಲಿನ ಮೇಲೆ ಕರ್ಪೂರ ಹಚ್ಚಿದ ಕಾರಣ ಗಾಯಗೊಂಡಿರುವ ವಿದ್ಯಾರ್ಥಿ 
ದೇಶ

ಶಿಸ್ತು ಪಾಲನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳ ಕಾಲಿನ ಮೇಲೆ ಕರ್ಪೂರ ಹಚ್ಚಿದ ಶಿಕ್ಷಕಿ!

ಶಾಲೆಯಲ್ಲಿ ಶಿಸ್ತು ಪರಿಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಕಾಲಿನ ಮೇಲೆ ಕರ್ಪೂರವಿಟ್ಟು ಬೆಂಕಿ ಹಚ್ಚಿ ಶಿಕ್ಷೆ ನೀಡಿರುವ ಅಮಾನವೀಯ...

ವಿಲ್ಲುಪುರಂ: ಶಾಲೆಯಲ್ಲಿ ಶಿಸ್ತು ಪರಿಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಕಾಲಿನ ಮೇಲೆ ಕರ್ಪೂರವಿಟ್ಟು ಬೆಂಕಿ ಹಚ್ಚಿ ಶಿಕ್ಷೆ ನೀಡಿರುವ ಅಮಾನವೀಯ ಘಟನೆಯೊಂದು ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.

ಉಲಂದೂರು ಪೇಟ್ ಸಮೀಪದ ಪಾಲಿಯ ಪಂಚಾಯತ್ ಯೂನಿಯನ್ ಪ್ರೈಮರಿ ಶಾಲೆಯ ವೈಜಯಂತಿಮಾಲಾ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ ಶಿಕ್ಷಕಿಯಾಗಿದ್ದಾಳೆ. 4 ಮತ್ತು 5 ನೇ ತರಗತಿಯ 13 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಶಾಲೆಯಲ್ಲಿ ಶಿಸ್ತು ಪರಿಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಕಾಲಿನ ಮೇಲೆ ಕರ್ಪೂರ ಹಚ್ಚಿ ಶಿಕ್ಷೆ ನೀಡಿದ್ದಾಳೆ. ಮಕ್ಕಳು ನೋವು, ಉರಿಯಿಂದ ಕೂಗುತ್ತಿದ್ದರೂ ಕರಗದ ಶಿಕ್ಷಕಿ ಶಿಕ್ಷೆಯನ್ನು ಮುಂದುವರೆಸಿದ್ದಾಳೆ.

ಶಿಕ್ಷೆ ನೀಡಿದ ಬಳಿಕ ಮಕ್ಕಳಿಗೆ ಬೆದರಿಕೆ ಹಾಕಿರುವ ಶಿಕ್ಷಕಿ ಈ ಬಗ್ಗೆ ಯಾರಿಗೂ ಹೇಳದಂತೆ ತಿಳಿಸಿದ್ದಾಳೆ. ಕಾಲು ಸಿಟ್ಟ ಕಾರಣ ಮಕ್ಕಳು ಕುಂಟುತ್ತಾ ಮನೆಗೆ ಬರುತ್ತಿರುವುದನ್ನು ನೋಡಿದ ಪೋಷಕರು ಗಾಬರಿಗೊಂಡಿದ್ದಾರೆ. ನಂತರ ಮಕ್ಕಳನ್ನು ವಿಚಾರಿಸಿದಾಗ ಮಕ್ಕಳು ಸತ್ಯಾಂಶವನ್ನು ಬಾಯಿ ಬಿಟ್ಟಿದ್ದಾರೆ.

ಶಿಕ್ಷಕಿ ವರ್ತನೆಯನ್ನು ನೋಡಿದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿರುವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ಶಿಕ್ಷಕಿ ವೈಜಯಂತಿಮಾಲಾ ಹಾಗೂ ಮುಖ್ಯ ಶಿಕ್ಷಕ ವರದರಾಜನ್ ಅವರನ್ನು ಅಮಾನತು ಮಾಡಿದೆ. ಅಲ್ಲದೆ, ಗಾಯಗೊಂಡಿದ್ದ ಸಂತೋಷ್ ರಾಜ್ (9), ಸುಬುಲಕ್ಷ್ಮಿ (8), ಪ್ರೀತಿ (9), ಹರಿ ಕೃಷ್ಣನ್ (9), ಪುಗಜೆನ್ತಿ (9), ಕೌಸಲ್ಯ (9) ರಾಜಶೇಖರ್ (10) ಮತ್ತು ಅನಿತಾ (10) ಎಂಬ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗ ಭ್ರಷ್ಟಾಚಾರ ಕುರಿತು ಅಧ್ಯಾಯ ವಿವಾದ: 8ನೇ ತರಗತಿ ಪಠ್ಯಪುಸ್ತಕವನ್ನು ಹಿಂಪಡೆದು ಸಾರ್ವಜನಿಕ ಕ್ಷಮೆಯಾಚಿಸಿದ NCERT

'ಯುದ್ಧ ಯಾವಾಗ ಕೊನೆಗೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ, ಅಮೆರಿಕವಲ್ಲ': ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ಪ್ರತಿಕ್ರಿಯೆ

'ಆತ ಹಾಗೆ ಹೇಳಬಾರದಿತ್ತು'.. ಕೊನೆಗೂ ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ಕುರಿತು ಮೌನ ಮುರಿದ ನಟಿ Trisha Krishnan!

ಟಿ20 ವಿಶ್ವಕಪ್ 2026: 82.1 ಕೋಟಿ... ವೀಕ್ಷಣೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ India-New Zealand ಫೈನಲ್ ಪಂದ್ಯ!

Cricket: 'ಭಾರತದ ಟಿ20 ವಿಶ್ವಕಪ್ ಗೆಲುವಿಗೆ ಇದೇ ಕಾರಣ..': ಪಾಕ್ ಮಾಜಿ ಆಟಗಾರ Shahid Afridi ಹೇಳಿದ್ದೇನು? Video

SCROLL FOR NEXT