ಸಾಂದರ್ಭಿಕ ಚಿತ್ರ 
ದೇಶ

ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ಬರಲಿದೆ 'ಅಚ್ಚೇದಿನ್'

ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದರೂ ವಿಮಾನ ಬರುವುದರಿಂದ ಹಲವು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತಡವಾಗಿ ಬರುವ ವಿಮಾನದಿಂದಾಗಿ ಎಷ್ಟೋ ಮಂದಿಯ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ...

ನವದೆಹಲಿ: ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದರೂ ವಿಮಾನ ಬರುವುದರಿಂದ ಹಲವು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತಡವಾಗಿ ಬರುವ ವಿಮಾನದಿಂದಾಗಿ ಎಷ್ಟೋ ಮಂದಿಯ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಮಸ್ಯೆಗಳಿಗೆ ವಿಮಾನಯಾನ ಸಚಿವಾಲಯ ಇದೀಗ ಫುಲ್ ಸ್ಟಾಪ್ ಇಟ್ಟಿದ್ದು, ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ಅಚ್ಚೇದಿನ್ ಬರಲಿದೆ.

ವಿಮಾನಯಾನ ಸಚಿವಾಲಯ ಪ್ರಯಾಣಿಕ ಸ್ನೇಹಿ ಹೊಸ ನಿಮಯಗಳನ್ನು ಘೋಷಿಸಿದ್ದು, ಟಿಕೆಟ್ ರದ್ದು ಶುಲ್ಕವು ಅದರ ಮೂಲ ಬೆಲೆಯನ್ನು ಮೀರಬಾರದು ಎಂದು ಹೇಳಿದೆ.

ಅಲ್ಲದೆ, ವಿಮಾನ ಬೋರ್ಡಿಂಗ್ ವೇಳೆ ಓವರ್-ಬುಕಿಂಗ್ ನಿಂದ ಸ್ಥಳವಿಲ್ಲದೆ ಟಿಕೆಟ್ ರದ್ದಾದಲ್ಲಿ ಪ್ರಯಾಣಿಕರಿಗೆ ರು. 20 ಸಾವಿರ ವರೆಗೂ ಪರಿಹಾರ ನೀಡಬೇಕು ಎಂದು ಹೇಳಿದ್ದು, ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದ್ದಲ್ಲಿ ಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುವ ಅಥವಾ ಕ್ರೆಡಿಟ್ ರೂಪದಲ್ಲಿ ಇರಿಸುವ ಅವಕಾಶವನ್ನು ನೀಡಿದೆ.

ವಿಮಾನ ಸಚಿವಾಲಯ ಘೋಷಿಸಿರುವ ನಿಯಮಗಳು ಈ ಕೆಳಕಂಡಂತಿವೆ...

  • ವಿಶೇಷ ಪ್ರಯಾಣ ದರ, ಪ್ರೋಮೋ ಸೇರಿದಂತೆ ಎಲ್ಲಾ ರೀತಿಯ ದರಗಳ ಮೇಲೆ ಮರುಪಾವತಿಗೆ ಅವಕಾಶ ಅನ್ವಯವಾಗಲಿದೆ. ವಿಮಾನ ದರ ಮರುಪಾವತಿಗೆ ಹೆಚ್ಚುವರಿ ಶುಲ್ಕ ಪಡೆಯಲಾಗುವುದಿಲ್ಲ.
  • ಆನ್ ಲೈನ್ ಮತ್ತು ಮಧ್ಯವರ್ತಿಗಳ ಮೂಲಕ ಮಾಡಿದ ಬುಕಿಂಗ್ ಗಳಿಗೆ 15 ದಿನಗಳ ಒಳಗಾಗಿ ಮರುಪಾವತಿ ಹಣವನ್ನು ಹಿಂದಿರುಗಿಸಬೇಕಿದೆ. ಪ್ರಯಾಣಿಕರ ಲಗೇಜ್ 15 ಕೆ.ಜಿ ಮೀರಿದಲ್ಲಿ ಹೆಚ್ಚುವರಿ ಪ್ರತಿ ಕೆ.ಜಿಗೆ ಕೇಲವ ರು.100ರಂತೆ ಹಣವನ್ನು ಪಾವತಿಸಬೇಕು.
  • ವಿಮಾನ ಸಂಸ್ಥೆ ವಿಮಾಮ ರದ್ಧತಿ ಸಂದರ್ಭದಲ್ಲಿ 24 ಗಂಟೆ ಮುಂಚಿವಾಗಿ ಘೋಷಿಸಿದಲ್ಲಿ ರು. 10 ಸಾವಿರ ವರೆಗೂ ಪರಿಹಾರ ನೀಡುವುದು ಮುಂತಾದ ನಿಯಮಗಳನ್ನು ಸಚಿವಾಲಯ ಘೋಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT