ಮುಂಬಯಿ: ಡೊಂಬಿವಿಲಿ ಬಿಜೆಪಿ ಶಾಸರ ದಲಿತರನ್ನು ಹಂದಿಗೆ ಹೋಲಿಸುವ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದೆ.
ಠಾಣೆ ಪ್ರದೇಶದಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ರವೀಂದ್ರ ಚವ್ಹಾಣ್ ನೀಡಿರುವ ಹೇಳಿಕೆ ದಲಿತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ದಲಿತರನ್ನು ಹಂದಿಗಳಿಗೆ ಹೋಲಿಸುತ್ತಿರುವ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ರವೀಂದ್ರ ಚವಾಣ್ ಕ್ಷಮೆಯಾಚಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಲಿತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಎನ್ಸಿಪಿ ಪಕ್ಷದ ಮುಖಂಡರು ಹಂದಿಗೆ ನಾಮಕಾರಣ ಕಾರ್ಯಕ್ರಮ ಮಾಡಿ ಅದಕ್ಕೆ ಬಿಜೆಪಿ ಶಾಸಕ ರವೀಂದ್ರ ಚೌಹಾನ್ ಅವರ ಹೆಸರಿಟ್ಟು ಪ್ರತಿಭಟಿಸಿದರು.
ನನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡವರು ನಾನು ಮಾತನಾಡಿದ್ದ ಆಡಿಯೋವನ್ನು ನಾಶಗೊಳಿಸಿ, ಹೊಸದಾಗಿ ಎಡಿಟ್ ಮಾಡಿದ್ದಾರೆ ಎಂದು ರವೀಂದ್ರ ಚವಾಣ್ ಸ್ಪಷ್ಟನೆ ನೀಡಿದ್ದಾರೆ.