ದೇಶ

ಸೂಟು, ಟೈ ಧರಿಸಿದರೆ ಅಧಿಕಾರಿಗಳಾಗಿ ಅಲ್ಲ, ವೇಯ್ಟರ್ ಗಳಾಗಿ ಕಾಣಿಸುತ್ತಾರೆ: ಸ್ವಾಮಿ

Manjula VN

ನವದೆಹಲಿ: ವಿದೇಶಕ್ಕೆ ತೆರಳುವ ಭಾರತೀಯ ಅಧಿಕಾರಿಗಳು ಪಾಶ್ಚಿಮಾತ್ಯ ಬಟ್ಟೆ ಧರಿಸಿದರೆ ಅಧಿಕಾರಿಗಳ ಬದಲು ವೇಯ್ಟರ್ ಗಳಾಗಿ ಕಾಣಿಸುತ್ತಾರೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಅವರು, ವಿದೇಶಕ್ಕೆ ಹೋಗುವ ಬಿಜೆಪಿ ನಾಯಕರು ಭಾರತದ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವಂತೆ ಸಚಿವರಿಗೆ ಪಕ್ಷ ಸೂಚನೆ ನೀಡಬೇಕು. ವಿದೇಶದಲ್ಲಿ ಸೂಟು ಹಾಗೂ ಟೈ ಯನ್ನು ಧರಿಸಿದರೆ ಅಧಿಕಾರಿಗಳಾಗಿ ಅಲ್ಲ, ವೇಯ್ಟರ್ ಗಳಾಗಿ ಕಾಣಿಸುತ್ತಾರೆಂದು ಹೇಳಿದ್ದಾರೆ.

ಬೀಜಿಂಗ್ ನಲ್ಲಿ ಅಧಿಕಾರಿಗಳನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸೂಟು ಹಾಗೂ ಟೈ ಧರಿಸಿರುವುದು ಇತ್ತೀಚೆಗಷ್ಟೇ ಟಿವಿ ಮಾಧ್ಯಮಗಳಲ್ಲಿ ಕಂಡುಬಂದಿತ್ತು. ಈ ಬೆನ್ನಲ್ಲೇ ಸ್ವಾಮಿ ಅವರು ಟ್ವಿಟರ್ ನಲ್ಲಿ ಯಾರ ಹೆಸರನ್ನು ತೆಗೆದುಕೊಳ್ಳದೆಯೇ ಈ ರೀತಿಯಾಗಿ ಹೇಳಿರುವುದು ಪಕ್ಷದ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.

SCROLL FOR NEXT