ದೇಶ

ವೇಯ್ಟರ್ ಹೇಳಿಕೆ: ಸ್ಪಷ್ಟನೆ ನೀಡಿದ ಸುಬ್ರಮಣಿಯನ್ ಸ್ವಾಮಿ

Manjula VN

ನವದೆಹಲಿ: ಭಾರತೀಯ ಸಾಂಪ್ರಾದಾಯಿಕ ಉಡುಗೆ ಕುರಿತು ನೀಡಿದ್ದ ವೇಯ್ಟರ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯವೊಂದರ ಜೊತೆ ಮಾತನಾಡಿರುವ ಅವರು, ಪಾಶ್ಚಿಮಾತ್ರ ವಸ್ತ್ರದ ಕುರಿತು ಟೀಕೆ ಮಾಡುತ್ತಿರುವುದು ಇದು ಹೊಸದೇನಲ್ಲ. ಪಾಶ್ಚಿಮಾತ್ಯ ವಸ್ತ್ರ ಧರಿಸಿ ವಿದೇಶಕ್ಕೆ ಹೋಗುವಾಗ ಅಧಿಕಾರಿಗಳ ಕುರಿತು ಈ ಹಿಂದಿನಿಂದಲೂ ಟೀಕೆ ವ್ಯಕ್ತಪಡಿಸುತ್ತಲೇ ಬಂದಿದ್ದೇನೆ.ಈ ಹಿಂದೆ ಯುಪಿಎ ಅಧಿಕಾರಾವಧಿಯಲ್ಲಿಯೂ ಕೂಡ ನಾನು ಈ ರೀತಿಯ ಟೀಕೆ ವ್ಯಕ್ತಪಡಿಸಿದ್ದೇನೆಂದು ಹೇಳಿದ್ದಾರೆ.

ನಾನು ಯಾವಾಗಲೂ ಭಾರತೀಯ ಸಂಪ್ರದಾಯದ ಬಟ್ಟೆಗಳನ್ನೇ ಧರಿಸುತ್ತೇನೆ. ನಾನು ಏನನ್ನು ಅಭ್ಯಾಸ ಮಾಡಿಕೊಂಡಿದ್ದೇನೆಯೋ ಅದನ್ನೇ ಬೋಧಿಸುತ್ತೇನೆ. ಯಾರನ್ನು ಗುರಿ ಮಾಡಬೇಕೆಂಬ ಉದ್ದೇಶ ನನಗಿಲ್ಲ. ಜೇಟ್ಲಿಯವರು ಪಾಶ್ಚಿಮಾತ್ಯ ವಸ್ತ್ರದಲ್ಲಿ ಚೆನ್ನಾಗಿ ಕಾಣಿಸುತ್ತಿದ್ದರು ಎಂದು ಹೇಳಿದ್ದಾರೆ.

SCROLL FOR NEXT