ನೇಪಾಳಿ ರಾಮಾಯಣದ ಕರ್ತೃ ಭಾನುಭಕ್ತ ಆಚಾರ್ಯ 
ದೇಶ

ಇಂಗ್ಲೀಷ್ ಗೆ ಭಾಷಾಂತರಗೊಂಡ ನೇಪಾಳಿ ರಾಮಾಯಣದ ಕೃತಿ ಬಿಡುಗಡೆ

19 ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ಎಂಬ ಕವಿ ಬರೆದಿದ್ದ ನೇಪಾಳಿ ರಾಮಾಯಣದ ಇಂಗ್ಲಿಷ್ ಗೆ ಭಾಷಾಂತರಗೊಂಡ ಮೊದಲ ಕೃತಿ ಬಿಡುಗಡೆಯಾಗಿದೆ.

ಡಾರ್ಜಿಲಿಂಗ್: 19 ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ಎಂಬ ಕವಿ ಬರೆದಿದ್ದ ನೇಪಾಳಿ ರಾಮಾಯಣದ ಇಂಗ್ಲಿಷ್ ಗೆ ಭಾಷಾಂತರಗೊಂಡ ಮೊದಲ ಕೃತಿ ಬಿಡುಗಡೆಯಾಗಿದೆ. ಗೋಕುಲ್ ಸಿನ್ಹಾ ನೇಪಾಳಿ ರಾಮಾಯಣವನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದು, ಕೃತಿಯನ್ನು ಖ್ಯಾತ ಬರಹಗಾರ ಇಂದಿರಾಬಹದ್ದೂರ್ ರೈ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿದ್ದಾರೆ.

ಭಾನುಭಕ್ತ ಅವರ ರಾಮಾಯಣ ಕೃತಿ ಇತರ ಭಾಷೆಗಳಿಗೆ ಈಗಾಗಲೇ ಅನುವಾದವಾಗಿದೆಯಾದರೂ, ಅದು ಇಂಗ್ಲಿಷ್ ಗೆ ಭಾಷಾಂತರವಾಗಲು 200 ವರ್ಷ ಬೇಕಾಯಿತು, ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಗೋಕುಲ್ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ ಎಂದು ಇಂದಿರಾಬಹದ್ದೂರ್ ರೈ ಹೇಳಿದ್ದಾರೆ.
 
ಭಾನುಭಕ್ತ ಸಂಸ್ಕೃತದಿಂದ ರಾಮಾಯಣವನ್ನು ನೇಪಾಳಿಗೆ ಅನುವಾದ ಮಾಡಿದ್ದು ಮಾತ್ರವಲ್ಲದೇ ಕೃತಿಯಲ್ಲಿ ಭಾನುಭಕ್ತ ಲಯ ಎಂಬ ಕವಿತೆಯನ್ನು ಪರಿಚಯಿಸಿದ್ದಾರೆ ಎಂದು ಇಂದಿರಾಬಹದ್ದೂರ್ ರೈ ಭಾನುಭಕ್ತ ಆಚಾರ್ಯ ಕವಿಯನ್ನು ಸ್ಮರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: 'ಶಂಕಿತ ಆತ್ಮಹತ್ಯಾ ಬಾಂಬರ್ ಟೆಲಿಗ್ರಾಮ್‌ನಲ್ಲಿ ಮೂಲಭೂತವಾದಿ ವೈದ್ಯರ ಗುಂಪಿನ ಭಾಗವಾಗಿದ್ದ': ಯಾರೀತ? ಇಲ್ಲಿದೆ ಮಾಹಿತಿ

Red Fort blast- ಸಾವಿನ ಸಂಖ್ಯೆ 12ಕ್ಕೆ ಏರಿಕೆ, Hyundai i20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಪುಲ್ವಾಮಾ ವೈದ್ಯ

ಸ್ಫೋಟಕ್ಕೂ ಮುನ್ನ ಮಸೀದಿ ಬಳಿ 3 ಗಂಟೆ ಪಾರ್ಕ್‌: ನಿರ್ಗಮಿಸಿದ ಕೆಲ ನಿಮಿಷದಲ್ಲೇ ಕಾರ್‌ ಬ್ಲಾಸ್ಟ್‌, ಶಂಕಿತ ಆತ್ಮಹತ್ಯಾ ಬಾಂಬರ್ ಚಿತ್ರ ಬಹಿರಂಗ..!

ದೆಹಲಿ ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್

Delhi blast: 'ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ದೊಡ್ಡ ಪಾಪ; ಪಾಕ್ ಅನ್ನು ಬಹಿಷ್ಕರಿಸಬೇಕು': ಶಿಯಾ ಧರ್ಮಗುರು

SCROLL FOR NEXT