ನೇಪಾಳಿ ರಾಮಾಯಣದ ಕರ್ತೃ ಭಾನುಭಕ್ತ ಆಚಾರ್ಯ 
ದೇಶ

ಇಂಗ್ಲೀಷ್ ಗೆ ಭಾಷಾಂತರಗೊಂಡ ನೇಪಾಳಿ ರಾಮಾಯಣದ ಕೃತಿ ಬಿಡುಗಡೆ

19 ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ಎಂಬ ಕವಿ ಬರೆದಿದ್ದ ನೇಪಾಳಿ ರಾಮಾಯಣದ ಇಂಗ್ಲಿಷ್ ಗೆ ಭಾಷಾಂತರಗೊಂಡ ಮೊದಲ ಕೃತಿ ಬಿಡುಗಡೆಯಾಗಿದೆ.

ಡಾರ್ಜಿಲಿಂಗ್: 19 ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ಎಂಬ ಕವಿ ಬರೆದಿದ್ದ ನೇಪಾಳಿ ರಾಮಾಯಣದ ಇಂಗ್ಲಿಷ್ ಗೆ ಭಾಷಾಂತರಗೊಂಡ ಮೊದಲ ಕೃತಿ ಬಿಡುಗಡೆಯಾಗಿದೆ. ಗೋಕುಲ್ ಸಿನ್ಹಾ ನೇಪಾಳಿ ರಾಮಾಯಣವನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದು, ಕೃತಿಯನ್ನು ಖ್ಯಾತ ಬರಹಗಾರ ಇಂದಿರಾಬಹದ್ದೂರ್ ರೈ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿದ್ದಾರೆ.

ಭಾನುಭಕ್ತ ಅವರ ರಾಮಾಯಣ ಕೃತಿ ಇತರ ಭಾಷೆಗಳಿಗೆ ಈಗಾಗಲೇ ಅನುವಾದವಾಗಿದೆಯಾದರೂ, ಅದು ಇಂಗ್ಲಿಷ್ ಗೆ ಭಾಷಾಂತರವಾಗಲು 200 ವರ್ಷ ಬೇಕಾಯಿತು, ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಗೋಕುಲ್ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ ಎಂದು ಇಂದಿರಾಬಹದ್ದೂರ್ ರೈ ಹೇಳಿದ್ದಾರೆ.
 
ಭಾನುಭಕ್ತ ಸಂಸ್ಕೃತದಿಂದ ರಾಮಾಯಣವನ್ನು ನೇಪಾಳಿಗೆ ಅನುವಾದ ಮಾಡಿದ್ದು ಮಾತ್ರವಲ್ಲದೇ ಕೃತಿಯಲ್ಲಿ ಭಾನುಭಕ್ತ ಲಯ ಎಂಬ ಕವಿತೆಯನ್ನು ಪರಿಚಯಿಸಿದ್ದಾರೆ ಎಂದು ಇಂದಿರಾಬಹದ್ದೂರ್ ರೈ ಭಾನುಭಕ್ತ ಆಚಾರ್ಯ ಕವಿಯನ್ನು ಸ್ಮರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT