ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಪಂಚಗವ್ಯ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರು 
ದೇಶ

ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಪಂಚಗವ್ಯ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರು

ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಫರೀದಾಬಾದ್: ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ರಿಜ್ವಾನ್ ಹಾಗೂ ಮುಖ್ತಿಯಾರ್ ಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ ತಿನ್ನಿಸಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗೋರಕ್ಷಾ ದಳದ ಕಾರ್ಯಕರ್ತರ ವಿರುದ್ಧ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗೋರಕ್ಷಾ ದಳದ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದ ರಿಜ್ವಾನ್ ಹಾಗೂ ಮುಖ್ತಿಯಾರ್, ಮೇವಾಟ್ ನಿಂದ  ದೆಹಲಿಗೆ 300 ಕೆಜಿಯಷ್ಟು ಗೋಮಾಂಸ ಸಾಗಿಸುತ್ತಿದ್ದರು, ಈ ವೇಳೆ ವಾಹನವನ್ನು ತಡೆದ ಗೋರಕ್ಷಾ ದಳದ ಕಾರ್ಯಕರತರು ಇಬ್ಬರಿಗೂ ಪಂಚಗವ್ಯ ತಿನ್ನಿಸಿರುವ ವಿಡಿಯೋ ವೈರಲ್ ಆಗಿದೆ. ಪಂಚಗವ್ಯ ತಿನ್ನಿಸುವುದರೊಂದಿಗೆ ಗೋಮಾತಾ ಕಿ ಜೈ ಹಾಗೂ ಜೈ ಶ್ರೀ ರಾಮ್ ಎಂಬ ಘೋಷಣೆಗಳನ್ನು ಕೂಗುವಂತೆ ಜ್ವಾನ್ ಹಾಗೂ ಮುಖ್ತಿಯಾರ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT