ಸಾಂದರ್ಭಿಕ ಚಿತ್ರ 
ದೇಶ

ಬಜೆಟ್ ನಲ್ಲಿ ಹಲವು ಯೋಜನೆಗಳಿಂದ ರಾಜೀವ್ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ಫೆ.29ರಂದು ಮಂಡಿಸಿದ ತನ್ನ ಮೂರನೇ ಬಜೆಟ್‌ ನಲ್ಲಿ ಹಲವು...

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ಫೆ.29ರಂದು ಮಂಡಿಸಿದ ತನ್ನ ಮೂರನೇ ಬಜೆಟ್‌ ನಲ್ಲಿ ಹಲವು ಯೋಜನೆಗಳಿಗಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹೆಸರಿಗೆ ತಿಲಾಂಜಲಿ ಹೇಳಿ ಆ ಯೋಜನೆಗಳಿಗೆ ಮರುನಾಮಕರಣ ಮಾಡಲಾಗಿದೆ.
ಬಜೆಟ್ ನಲ್ಲಿ ಕನಿಷ್ಠ ನಾಲ್ಕು ಮುಖ್ಯ ಯೋಜನೆಗಳಿಗಿದ್ದ ರಾಜೀವ್ ಗಾಂಧಿ ಹೆಸರನ್ನು ಕೈಬಿಟ್ಟಿರುವ ನರೇಂದ್ರ ಮೋದಿ ಸರ್ಕಾರ, ಆ ಯೋಜನೆಗಳಿಗೆ ಬಿಜೆಪಿಯ ಯಾವುದೇ ಹಿರಿಯ ರಾಜಕೀಯ ನಾಯಕರ ಹೆಸರನ್ನು ಇಟ್ಟಿಲ್ಲ. ಬದಲಾಗಿ ಆ ಯೋಜನೆಗಳ ಹೆಸರುಗಳನ್ನು ರಾಜಕೀಯವಾಗಿ ಅಲಿಪ್ತಗೊಳಿಸಿರುವುದು ಗಮನಾರ್ಹವಾಗಿದೆ.
ಪಂಚಾಯತ್‌ ರಾಜ್‌ ಸಚಿವಾಲಯದ ವ್ಯಾಪ್ತಿಗೆ ಬರುವ, ಅಧಿಕಾರ ವಿಕೇಂದ್ರೀಕರಣದ, ರಾಜೀವ್‌ ಗಾಂಧಿ ಪಂಚಾಯತ್‌ ಸಶಕ್ತೀಕರಣ ಅಭಿಯಾನ ಯೋಜನೆಯ ಹೆಸರು ಎಪ್ರಿಲ್‌ 1ರಿಂದ ಪಂಚಾಯತ್‌ ಸಶಕ್ತೀಕರಣ ಅಭಿಯಾನ ಎಂದಾಗಲಿದೆ.
ಇನ್ನು ರಾಜೀವ್‌ ಗಾಂಧಿ ನ್ಯಾಶನಲ್‌ ಫೆಲೋಶಿಪ್‌ ಫಾರ್‌ ಸ್ಟೂಡೆಂಟ್ಸ್‌ ವಿದ್‌ ಡಿಸೆಬಿಲಿಟೀಸ್‌ ಎಂಬ ಯೋಜನೆಯ ಹೆಸರು ಇನ್ನು ಮುಂದೆ "ನ್ಯಾಶನಲ್‌ ಫೆಲೋಶಿಪ್‌ ಫಾರ್‌ ಸ್ಟೂಡೆಂಟ್ಸ್‌ ವಿದ್‌ ಡಿಸೆಬಿಲಿಟೀಸ್‌' ಎಂದಾಗಲಿದೆ.
ರಾಜೀವ್‌ ಗಾಂಧಿ ನ್ಯಾಶನಲ್‌ ಫೆಲೋಶಿಪ್‌ ಫಾರ್‌ ಶೆಡ್ನೂಲ್ಡ್‌ ಕ್ಯಾಸ್ಟ್ಸ್ ಯೋಜನೆಯ ಹೆಸರು ಇನ್ನು ಮುಂದೆ "ನ್ಯಾಶನಲ್‌ ಫೆಲೋಶಿಪ್‌ ಫಾರ್‌ ಶೆಡ್ನೂಲ್ಡ್‌ ಕ್ಯಾಸ್ಟ್ಸ್' ಎಂದಾಗಲಿದೆ.
ರಾಜೀವ್‌ ಗಾಂಧಿ ಖೇಲ್‌ ಅಭಿಯಾನ್‌ ಯೋಜನೆಯು ಹಲವು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಯೋಜನೆಯಾಗಿರುವುದರಿಂದ ಅದಕ್ಕೆ "ಖೇಲೋ ಇಂಡಿಯಾ' ಎಂಬ ಬೃಹತ್‌ ವ್ಯಾಪ್ತಿಯ, ಮುಂಚೂಣಿ ಯೋಜನೆಯ ಹೆಸರನ್ನು ಇಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT