ಉಪ ನ್ಯಾಯಾಧೀಶರು ಕಳಿಸಿದ ಮೆಮೋ ಮತ್ತು ಅದಕ್ಕೆ ವಸಂತಿ ನೀಡಿದ ಉತ್ತರ (ಕೃಪೆ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ) 
ದೇಶ

ನೀನು ಒಳ ಉಡುಪುಗಳನ್ನು ಯಾಕೆ ತೊಳೆದಿಲ್ಲ?: ಆಫೀಸ್ ಅಸಿಸ್ಟೆಂಟ್‌ಗೆ ಮೆಮೋ ಕಳಿಸಿದ ಜಡ್ಜ್

ಉಪ ನ್ಯಾಯಾಧೀಶರ ಮನೆಯಲ್ಲಿ ಬಟ್ಟೆಗಳನ್ನು ಒಗೆಯಲು ನಿರಾಕರಿಸಿದ ಕಚೇರಿ ಸಹಾಯಕಿ ಮಹಿಳೆಗೆ ನ್ಯಾಯಾಧೀಶರೊಬ್ಬರು ಮೆಮೋ ಕಳುಹಿಸಿ ವಿವರಣೆ ಕೇಳಿದ್ದು...

ಈರೋಡ್: ಉಪ ನ್ಯಾಯಾಧೀಶರ ಮನೆಯಲ್ಲಿ ಬಟ್ಟೆಗಳನ್ನು ಒಗೆಯಲು ನಿರಾಕರಿಸಿದ ಕಚೇರಿ ಸಹಾಯಕಿ ಮಹಿಳೆಗೆ ನ್ಯಾಯಾಧೀಶರೊಬ್ಬರು ಮೆಮೋ ಕಳುಹಿಸಿ ವಿವರಣೆ ಕೇಳಿದ್ದು ಈಗ ವಿವಾದಕ್ಕೆಡೆಯಾಗಿದೆ.

ತಮಿಳ್ನಾಡಿನಲ್ಲಿ ಆ ಘಟನೆ ನಡೆದಿದ್ದು, ಒಂದು ತಿಂಗಳ ಹಿಂದೆ ನ್ಯಾಯಾಧೀಶರು ಈ ಮಹಿಳೆಗೆ ಮೆಮೋ ಕಳುಹಿಸಿದ್ದರು.

ಉಪ ನ್ಯಾಯಾಧೀಶರ ಮನೆಯಲ್ಲಿ ಒಗೆಯಲು ನೀಡಿದ ಬಟ್ಟೆಗಳನ್ನು ನೀನು ಸರಿಯಾಗಿ ಒಗೆದಿಲ್ಲ. ಅಷ್ಟೇ ಅಲ್ಲ ಒಳಉಡುಪುಗಳನ್ನು ಒಗೆಯಲು ನಿರಾಕರಿಸಿ ಅವುಗಳನ್ನು ದೂರ ತಳ್ಳಿದ್ದೆ. ಇಷ್ಟೇ ಅಲ್ಲದೆ ನೀನು ಜಡ್ಜ್ ಮತ್ತು ಅವರ ಪತ್ನಿಯೊಂದಿಗೆ ಜಗಳವಾಡಿದ್ದೆ. ಈ ಬಗ್ಗೆ ನಿನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆ ವಿವರಿಸಿ ಎಂದು ಸತ್ಯಮಂಗಲಂ ಸಬ್ ಕೋರ್ಟ್ ಕಚೇರಿ ಸಹಾಯಕಿ ಎಸ್. ವಸಂತಿ ಎಂಬವರಿಗೆ ಫೆ. 1, 2016ರಂದು ಉಪ ನ್ಯಾಯಾಧೀಶ ಸೆಲ್ವಂ ಅವರ ಮೆಮೋ ಕಳಿಸಿದ್ದರು. ಈ ಮೆಮೋಗೆ ಒಂದು ವಾರದಲ್ಲಿ ಉತ್ತರಿಸುವಂತೆ ಆದೇಶಿಸಲಾಗಿತ್ತು. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ವಸಂತಿ, ಜಡ್ಜ್ ಅವರ ಪತ್ನಿಯೂ ನನ್ನೊಂದಿಗೆ ಜಗಳವಾಡಿದ್ದರು. ಮೆಮೋ ಸಿಕ್ಕಿದ ಮರುದಿನವೇ ನಾನು ಈರೋಡ್ ನಲ್ಲಿರುವ ಜಿಲ್ಲಾ ನ್ಯಾಯಾಧೀಶರ ಮನೆಗೆ ಹೋಗಿದ್ದೆ. ಆದರೆ ಅವರು ಅಲ್ಲಿರಲಿಲ್ಲ. ಈ ಮೆಮೋವನ್ನು ಅವರ ಸಹಾಯಕರಿಗೆ ತೋರಿಸಿದ್ದು, ಅವರು ನನ್ನನ್ನು ಸಮಾಧಾನ ಪಡಿಸಿದ್ದರು.
ಇದಾದ ನಂತರ ವಸಂತಿ ಅವರು ಫೆ. 4 ಕ್ಕೆ ತಾನು ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಈ ರೀತಿಯ ತಪ್ಪು ಮಾಡಲ್ಲ, ಈ ಬಾರಿ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು. ಇದನ್ನು ಆಲಿಸಿದ ನ್ಯಾಯಾಧೀಶರು ತನ್ನ ಪತ್ನಿಯ ಬಗ್ಗೆ ಏನೂ ಚಿಂತೆ ಮಾಡಬೇಡ, ನೀನು ಕೆಲಸ ಮುಂದುವರಿಸು ಎಂದು ಹೇಳಿದ್ದರು. ಇದಾದ ನಂತರ ನಾನು ಎಂದಿನಂತೆ ಕೆಲಸ ಮಾಡುತ್ತಿದ್ದು, ಆಮೇಲೆ ಅಲ್ಲಿ ಯಾವುದೇ ಜಗಳ ನಡೆದಿಲ್ಲ ಎಂದು ವಸಂತಿ ಹೇಳಿದ್ದಾರೆ. 
ಈ ವಿಷಯವೆಲ್ಲವೂ ತಣ್ಣಗಾಗುವ ಹೊತ್ತಿಗೆ ಜಡ್ಜ್ ಮೆಮೋ ಕಳಿಸಿದ ವಿಷಯ ಬಹಿರಂಗವಾಗಿದೆ. ಕಚೇರಿ ಸಹಾಯಕಿಗೆ ಜಡ್ಜ್ ಕಳುಹಿಸಿದ ಮೆಮೋ ಬಹಿರಂಗವಾಗುತ್ತಿದ್ದಂತೆ ಇದು ವಿವಾದಕ್ಕೆಡೆಯಾಗಿದೆ.
ಕಚೇರಿ ಸಹಾಯಕಿಗೆ ಈ ರೀತಿ ಕಿರುಕುಳ ನೀಡಿರುವುದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಲಿದ್ದೇವೆ ಎಂದು ತಮಿಳ್ನಾಡು ನ್ಯಾಯಾಂಗ ನೌಕರರ ಸಂಘದ ನಾಯಕ ಹೇಳಿದ್ದಾರೆ. ಇದೇ ಸಂಘ ಈ ಸಂಬಂಧ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT