ಉಪ ನ್ಯಾಯಾಧೀಶರು ಕಳಿಸಿದ ಮೆಮೋ ಮತ್ತು ಅದಕ್ಕೆ ವಸಂತಿ ನೀಡಿದ ಉತ್ತರ (ಕೃಪೆ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ) 
ದೇಶ

ನೀನು ಒಳ ಉಡುಪುಗಳನ್ನು ಯಾಕೆ ತೊಳೆದಿಲ್ಲ?: ಆಫೀಸ್ ಅಸಿಸ್ಟೆಂಟ್‌ಗೆ ಮೆಮೋ ಕಳಿಸಿದ ಜಡ್ಜ್

ಉಪ ನ್ಯಾಯಾಧೀಶರ ಮನೆಯಲ್ಲಿ ಬಟ್ಟೆಗಳನ್ನು ಒಗೆಯಲು ನಿರಾಕರಿಸಿದ ಕಚೇರಿ ಸಹಾಯಕಿ ಮಹಿಳೆಗೆ ನ್ಯಾಯಾಧೀಶರೊಬ್ಬರು ಮೆಮೋ ಕಳುಹಿಸಿ ವಿವರಣೆ ಕೇಳಿದ್ದು...

ಈರೋಡ್: ಉಪ ನ್ಯಾಯಾಧೀಶರ ಮನೆಯಲ್ಲಿ ಬಟ್ಟೆಗಳನ್ನು ಒಗೆಯಲು ನಿರಾಕರಿಸಿದ ಕಚೇರಿ ಸಹಾಯಕಿ ಮಹಿಳೆಗೆ ನ್ಯಾಯಾಧೀಶರೊಬ್ಬರು ಮೆಮೋ ಕಳುಹಿಸಿ ವಿವರಣೆ ಕೇಳಿದ್ದು ಈಗ ವಿವಾದಕ್ಕೆಡೆಯಾಗಿದೆ.

ತಮಿಳ್ನಾಡಿನಲ್ಲಿ ಆ ಘಟನೆ ನಡೆದಿದ್ದು, ಒಂದು ತಿಂಗಳ ಹಿಂದೆ ನ್ಯಾಯಾಧೀಶರು ಈ ಮಹಿಳೆಗೆ ಮೆಮೋ ಕಳುಹಿಸಿದ್ದರು.

ಉಪ ನ್ಯಾಯಾಧೀಶರ ಮನೆಯಲ್ಲಿ ಒಗೆಯಲು ನೀಡಿದ ಬಟ್ಟೆಗಳನ್ನು ನೀನು ಸರಿಯಾಗಿ ಒಗೆದಿಲ್ಲ. ಅಷ್ಟೇ ಅಲ್ಲ ಒಳಉಡುಪುಗಳನ್ನು ಒಗೆಯಲು ನಿರಾಕರಿಸಿ ಅವುಗಳನ್ನು ದೂರ ತಳ್ಳಿದ್ದೆ. ಇಷ್ಟೇ ಅಲ್ಲದೆ ನೀನು ಜಡ್ಜ್ ಮತ್ತು ಅವರ ಪತ್ನಿಯೊಂದಿಗೆ ಜಗಳವಾಡಿದ್ದೆ. ಈ ಬಗ್ಗೆ ನಿನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆ ವಿವರಿಸಿ ಎಂದು ಸತ್ಯಮಂಗಲಂ ಸಬ್ ಕೋರ್ಟ್ ಕಚೇರಿ ಸಹಾಯಕಿ ಎಸ್. ವಸಂತಿ ಎಂಬವರಿಗೆ ಫೆ. 1, 2016ರಂದು ಉಪ ನ್ಯಾಯಾಧೀಶ ಸೆಲ್ವಂ ಅವರ ಮೆಮೋ ಕಳಿಸಿದ್ದರು. ಈ ಮೆಮೋಗೆ ಒಂದು ವಾರದಲ್ಲಿ ಉತ್ತರಿಸುವಂತೆ ಆದೇಶಿಸಲಾಗಿತ್ತು. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ವಸಂತಿ, ಜಡ್ಜ್ ಅವರ ಪತ್ನಿಯೂ ನನ್ನೊಂದಿಗೆ ಜಗಳವಾಡಿದ್ದರು. ಮೆಮೋ ಸಿಕ್ಕಿದ ಮರುದಿನವೇ ನಾನು ಈರೋಡ್ ನಲ್ಲಿರುವ ಜಿಲ್ಲಾ ನ್ಯಾಯಾಧೀಶರ ಮನೆಗೆ ಹೋಗಿದ್ದೆ. ಆದರೆ ಅವರು ಅಲ್ಲಿರಲಿಲ್ಲ. ಈ ಮೆಮೋವನ್ನು ಅವರ ಸಹಾಯಕರಿಗೆ ತೋರಿಸಿದ್ದು, ಅವರು ನನ್ನನ್ನು ಸಮಾಧಾನ ಪಡಿಸಿದ್ದರು.
ಇದಾದ ನಂತರ ವಸಂತಿ ಅವರು ಫೆ. 4 ಕ್ಕೆ ತಾನು ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಈ ರೀತಿಯ ತಪ್ಪು ಮಾಡಲ್ಲ, ಈ ಬಾರಿ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು. ಇದನ್ನು ಆಲಿಸಿದ ನ್ಯಾಯಾಧೀಶರು ತನ್ನ ಪತ್ನಿಯ ಬಗ್ಗೆ ಏನೂ ಚಿಂತೆ ಮಾಡಬೇಡ, ನೀನು ಕೆಲಸ ಮುಂದುವರಿಸು ಎಂದು ಹೇಳಿದ್ದರು. ಇದಾದ ನಂತರ ನಾನು ಎಂದಿನಂತೆ ಕೆಲಸ ಮಾಡುತ್ತಿದ್ದು, ಆಮೇಲೆ ಅಲ್ಲಿ ಯಾವುದೇ ಜಗಳ ನಡೆದಿಲ್ಲ ಎಂದು ವಸಂತಿ ಹೇಳಿದ್ದಾರೆ. 
ಈ ವಿಷಯವೆಲ್ಲವೂ ತಣ್ಣಗಾಗುವ ಹೊತ್ತಿಗೆ ಜಡ್ಜ್ ಮೆಮೋ ಕಳಿಸಿದ ವಿಷಯ ಬಹಿರಂಗವಾಗಿದೆ. ಕಚೇರಿ ಸಹಾಯಕಿಗೆ ಜಡ್ಜ್ ಕಳುಹಿಸಿದ ಮೆಮೋ ಬಹಿರಂಗವಾಗುತ್ತಿದ್ದಂತೆ ಇದು ವಿವಾದಕ್ಕೆಡೆಯಾಗಿದೆ.
ಕಚೇರಿ ಸಹಾಯಕಿಗೆ ಈ ರೀತಿ ಕಿರುಕುಳ ನೀಡಿರುವುದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಲಿದ್ದೇವೆ ಎಂದು ತಮಿಳ್ನಾಡು ನ್ಯಾಯಾಂಗ ನೌಕರರ ಸಂಘದ ನಾಯಕ ಹೇಳಿದ್ದಾರೆ. ಇದೇ ಸಂಘ ಈ ಸಂಬಂಧ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT