ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲ: ಬಿಜೆಪಿ ಶಾಸಕಿ 
ದೇಶ

ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲ: ಬಿಜೆಪಿ ಶಾಸಕಿ

ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್...

ಇಂದೋರ್: ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್ ಅವರು  ಮಂಗಳವಾರ ಹೇಳಿದ್ದಾರೆ.

ಮಹಿಳಾ ದಿನಾಚರಣೆಯ ಅಂಗವಾಗಿ ಇಂದೋರ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಶಾಕಿ ಉಷಾ ಠಾಕೂರ್ ಅವರು ಜೆಎನ್ ಯು ವಿವಾದವನ್ನು  ಪ್ರಸ್ತಾಪಿಸಿದ್ದರು. ಈ ವೇಳೆ ತಾಯಿಯಾದಳು ತನ್ನ ಮಗುವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿರ್ಲಕ್ಷ್ಯವಹಿಸಿದರೆ ಆ ಮಕ್ಕಳು ಉಗ್ರರು, ಮಾವೋವಾದಿಗಳು ಹಾಗೂ ದೇಶ ವಿರೋಧಿಗಳಾಗುತ್ತಾರೆ ಎಂದು  ಹೇಳಿದ್ದಾರೆ.

ಮಕ್ಕಳು ಏನೇ ಆದರೂ ಅದಕ್ಕೆ ತಾಯಿಯೇ ಜವಾಬ್ದಾರಳು. ದೇಶಭಕ್ತಿ ಹಾಗೂ ದೇಶದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ಆಕೆ ವಿಫಲವಾದರೆ, ಆ ಮಗು ಭಯೋತ್ಪಾದನಾಗುತ್ತದೆ.  ಮಾವೋವಾದಿಯಾಗುತ್ತದೆ ಹಾಗೂ ದೇಶ ವಿರೋಧಿಯಾಗುತ್ತದೆ ಇದಕ್ಕೆಲ್ಲಾ ತಾಯಿಯೇ ಜವಾಬ್ದಾರಳಾಗಿರುತ್ತಾಳೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT