ಸಲ್ಮಾನ್ ಖುರ್ಷಿದ್ 
ದೇಶ

ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವುದು ವ್ಯಕ್ತಿಗತ ಆಯ್ಕೆ: ಸಲ್ಮಾನ್ ಖುರ್ಷಿದ್

ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದು ಪ್ರಜೆಗಳ ಆಯ್ಕೆ, ಅವರಿಗೆ ಇಷ್ಟವಿದ್ದರೇ ಹೇಳುತ್ತಾರೆ, ಇಲ್ಲದಿದ್ದರೇ ಯಾರು ಅವರನ್ನು ಒತ್ತಾಯ ಮಾಡಬಾರದು...

ನವದೆಹಲಿ: ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದು ಪ್ರಜೆಗಳ ಆಯ್ಕೆ, ಅವರಿಗೆ ಇಷ್ಟವಿದ್ದರೇ ಹೇಳುತ್ತಾರೆ, ಇಲ್ಲದಿದ್ದರೇ ಯಾರು ಅವರನ್ನು ಒತ್ತಾಯ ಮಾಡಬಾರದು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಎಐಎಂಐಎಂ ಮುಖಂಡ ಅಸಾದಾದ್ದೀನ್ ಒವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖುರ್ಷಿದ್ ಭಾರತ್ ಮಾತಾ ಕೀ ಜೈ  ಎಂಬ ಘೋಷಣೆಯನ್ನು ಸಾರ್ವಜನಿಕವಾಗಿ ಕೂಗುವುದು  ಅವರ ಸ್ವಂತ ಆಯ್ಕೆಗೆ ಬಿಡಬೇಕು. ಯಾರ ಮೇಲೂ ಒತ್ತಡ ಹೇರಬಾರದು ಎಂದು ಹೇಳಿದ್ದಾರೆ.

ನಾವು ನಮಗೆ ಹೆಮ್ಮೆ ಎನಿಸಿದಾಗ ರಾಷ್ಟ್ರಗೀತೆ ಹಾಡುತ್ತೇವೆ, ನಮ್ಮ ರಾಷ್ಟ್ರ ಧ್ವಜ ನೋಡಿದಾಗ ವಂದೇ ಮಾತರಂ ಎಂದು ಸೆಲ್ಯೂಟ್ ಹೋಡಿತೇವೆ, ಆದರೆ ಕೆಲ ಜನಗಳಿಗೆ ಇದನ್ನು ಮಾಡುವುದು ಇಷ್ಟವಿರುವುದಿಲ್ಲ, ಆಗ ಅದನ್ನು ಅವರ ಆಯ್ಕೆಗೆ ಬಿಟ್ಟು ಬಿಡಬೇಕು ಎಂದು ಹೇಳಿದ್ದಾರೆ.

ಇಂದಿನ ಯುವ ಜನಾಂಗಕ್ಕೆ ಭಾರತ್ ಮಾತಾ ಕಿ ಜೈ ಎಂದು ಹೇಳಿಸಬೇಕು ಎಂದು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಮಾರ್ಚ್ 3 ರಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಸಾದುದ್ದೀನ್ ಒವೈಸಿ, ತಮ್ಮ ಕುತ್ತಿಗೆ ಮೇಲೆ ಚಾಕು ಇಟ್ಟರು ನಾನು ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT