ಆರೆಸ್ಸೆಸ್ಸ್ 
ದೇಶ

ವಿಜಯದಶಮಿ ನಂತರ ಆರೆಸ್ಸೆಸ್ಸ್ ಕಾರ್ಯಕರ್ತರಿಗೆ ಪ್ಯಾಂಟ್ಸ್

ವಿಜಯ ದಶಮಿಯ ನಂತರ ಆರೆಸ್ಸೆಸ್ಸ್ ಹೊಸ ಸಮವಸ್ತ್ರವಾದ ಖಾಕಿ ಪ್ಯಾಂಟ್ಸ್ ಧರಿಸಲಿದೆ ಎಂದು ಸಂಘಚಾಲರ್ (ಕೊಂಕಣ್ ವಿಭಾಗ) ಸತೀಶ್ ಮೋದ್ ...

ಮುಂಬೈ: ವಿಜಯ ದಶಮಿಯ ನಂತರ ಆರೆಸ್ಸೆಸ್ಸ್ ಹೊಸ ಸಮವಸ್ತ್ರವಾದ ಖಾಕಿ ಪ್ಯಾಂಟ್ಸ್ ಧರಿಸಲಿದೆ ಎಂದು ಸಂಘಚಾಲರ್ (ಕೊಂಕಣ್ ವಿಭಾಗ) ಸತೀಶ್ ಮೋದ್ ಹೇಳಿದ್ದಾರೆ. ಈ ವರ್ಷ ಅಕ್ಟೋಬರ್ 11ಕ್ಕೆ ವಿಜಯ ದಶಮಿ, ಅಂದಿನಿಂದ ಆರೆಸ್ಸೆಸ್ಸ್ ಕಾರ್ಯಕರ್ತರು ಖಾಕಿ ಪ್ಯಾಂಟ್ಸ್ ಧರಿಸಲಿದ್ದಾರೆ. 
ಕಾಲದೊಂದಿಗೆ ಬದಲಾವಣೆ ಬಯಸಿ 91 ವರ್ಷ ಹಳೆಯ ಇತಿಹಾಸವಿರುವ ಖಾಕಿ ಚಡ್ಡಿಯ ಸಮವಸ್ತ್ರವನ್ನು ಬದಲಿಸಲು ಆರೆಸ್ಸೆಸ್ ತೀರ್ಮಾನ ಕೈಗೊಂಡಿತ್ತು. ಭಾರತದಾದ್ಯಂತ ಆರೆಸ್ಸೆಸ್‌ಗೆ 56,959 ಶಾಖೆಗಳಿವೆ. ಇದರಲ್ಲಿ  5,500 ಶಾಖೆಗಳು ಕಳೆದ ಒಂದು ವರ್ಷದಲ್ಲಿ ರೂಪುಗೊಂಡವುಗಳಾಗಿವೆ. ಮುಂಬೈ-ಕೊಂಕಣ್ ಪ್ರದೇಶದಲ್ಲಿ 626 ಶಾಖೆಗಳಿವೆ ಎಂದು ಸತೀಶ್ ಮೋದ್ ಹೇಳಿದ್ದಾರೆ. 
ಶಾಖೆಗಳ ಸಂಖ್ಯೆ ಏರಿಕೆಯಾಗಲು ಪ್ರಧಾನಿ ಮೋದಿಯವರ ಜನಪ್ರಿಯತೆಯೇ ಕಾರಣವೇ ಎಂದು ಕೇಳಿದಾಗ, ಪ್ರಸ್ತುತ ಪರಿಸ್ಥಿತಿ ನಮಗೆ ಅನುಕೂಲವಾಗಿಲ್ಲ ಎಂಬುದನ್ನು ನಾನು ಅಲ್ಲಗೆಳೆಯುವುದಿಲ್ಲ. ಆದಾಗ್ಯೂ, ಇದಕ್ಕೆ ಮೋದಿ ಒಬ್ಬರೇ ಕಾರಣರಲ್ಲ,  2014ರಲ್ಲಿ ಸರ್ಕಾರ ಅಧಿಕಾರಕ್ಕೇರಿದ್ದರೂ 2012ರಲ್ಲಿ ಈ ಬದಲಾವಣೆಗಳು ಕಾಣತೊಡಗಿದ್ದವು ಎಂದು ಮೋದ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT