ದೇಶ

ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಯತ್ನಿಸುತ್ತಿದೆ: ಮಾಯಾವತಿ

Rashmi Kasaragodu
ನವದೆಹಲಿ: ಭಾರತದಲ್ಲಿ ಬಿಜೆಪಿ ಕೋಮುವಾದವನ್ನು ಪಸರಿಸಿ, ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಯತ್ನಿಸುತ್ತಿದೆ ಎಂದು ಬಿಎಸ್ಪಿ ನೇತಾರೆ ಮಾಯಾವತಿ ಹೇಳಿದ್ದಾರೆ.
ಶನಿವಾರ ದೆಹಲಿಯಲ್ಲಿ ನಡೆದ ತಮ್ಮ ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾ, ಕೇಂದ್ರ ಸರ್ಕಾರ ರೈತರಿಗೆ, ಸಣ್ಣ ಕೈಗಾರಕೋದ್ಯಮಿಗಳಿಗೆ ಮತ್ತು ಬಡವರಿಗೆ ಅಚ್ಛೇದಿನ್ ತರುತ್ತದೆ ಎಂದು ಹೇಳಿ ಮೋಸ ಮಾಡಿದ್ದಾರೆ. ಇದರಿಂದ ದೊಡ್ಡ ಉದ್ಯಮಿಗಳಿಗಷ್ಟೇ ಲಾಭವಾಗಿದ್ದು.
ಅದೇ ವೇಳೆ ಬೆಲೆಯೇರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವುದಕ್ಕಾಗಿ ಬಿಜೆಪಿ ಸರ್ಕಾರ ಕೋಮುವಾದವನ್ನು ಹರಡಿ ದೇಶದಲ್ಲಿ ಧರ್ಮಗಳ ನಡುವೆ ದ್ವೇಷವನ್ನು ತಂದಿಡುತ್ತಿದೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸಂಕುಚಿತ ಹಾಗೂ ಜಾತಿಬೇಧ ಧೋರಣೆಯನ್ನು ಹೊಂದಿರುವ ಆರೆಸ್ಸೆಸ್ ನ ಹಿಂದೂರಾಷ್ಟ್ರ ಅಜೆಂಡಾವನ್ನು ಅನುಸರಿಸುತ್ತಿದೆ ಎಂದು ಮಾಯಾ  ಆರೋಪಿಸಿದ್ದಾರೆ.
SCROLL FOR NEXT