ವಿಜಯ್ ಮಲ್ಯ ಹಾಗೂ ಅರುಣ್ ಜೇಟ್ಲಿ 
ದೇಶ

ಮಲ್ಯರಿಂದ ಭಾರತೀಯ ಉದ್ಯಮಿಗಳಿಗೆ ಕೆಟ್ಟ ಹೆಸರು: ಅರುಣ್ ಜೇಟ್ಲಿ

ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತದಲ್ಲಿನ ಖಾಸಗಿ ವಲಯದ ಉದ್ಯಮಿಗಳಿಗೂ ಕೆಟ್ಟ ಹೆಸರನ್ನು ತಂದಿದ್ದಾರೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ...

ಮುಂಬೈ: ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತದಲ್ಲಿನ ಖಾಸಗಿ ವಲಯದ ಉದ್ಯಮಿಗಳಿಗೂ ಕೆಟ್ಟ ಹೆಸರನ್ನು ತಂದಿದ್ದಾರೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.

ಮುಂಬೈ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಚರ್ಚೆಯೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಮಲ್ಯ ಅವರು ತಾವಷ್ಟೇ ಕೆಟ್ಟ ಹೆಸರನ್ನು ಪಡೆದುಕೊಂಡಿಲ್ಲ, ಭಾರತದಲ್ಲಿನ ಖಾಸಗಿ ವಲಯದ ಉದ್ಯಮಿಗಳಿಗೂ ಕೆಟ್ಟ ಹೆಸರನ್ನು ತಂದಿದ್ದಾರೆಂದು ಹೇಳಿದ್ದಾರೆ.

ಸಾಲ ತೀರಿಸುವುದನ್ನು ತಿರಸ್ಕರಿಸುತ್ತಿರುವ ಮಲ್ಯ ಅವರಿಂದ ಇಂದು ಬ್ಯಾಂಕುಗಳ ಮೇಲೆ ಪರಿಣಾಮ ಬೀರುತ್ತಿದೆ. ಬ್ಯಾಂಕುಗಳಿಂದ ಸಾಲ ತೆಗೆದುಕೊಂಡಿರುವ ಮತ್ತಷ್ಟು ಉದ್ಯಮಗಳು ಸಾಲ ಮರುಪಾವತಿ ಮಾಡುವುದನ್ನು ತಡ ಮಾಡುತ್ತಿದ್ದಾರೆ. ಮಲ್ಯ ಅವರು ಈ ರೀತಿಯಾಗಿ ಎಷ್ಟು ದಿನಗಳ ಕಾಲ ಜೀವನ ನಡೆಸಲು ಸಾಧ್ಯ.

ಮಲ್ಯ ಅವರ ಪ್ರಕರಣ ಸಾಮಾನ್ಯ ಪ್ರಕರಣಗಳಂತಲ್ಲ. ಈ ಪ್ರಕರಗಳು ಇಂದು ಉದ್ಯಮಗಳ ವಾತಾವರಣವನ್ನು ಹಾಳು ಮಾಡಿದೆ. ವ್ಯವಹಾರ ವೈಫಲ್ಯದಿಂದಾಗಿ ಇಂದು ಉದ್ಯಮ ವಲಯಗಳು, ವಿಮಾನಯಾನ ವಲಯಗಳು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಮಲ್ಯ ಜೊತೆಗೆ ಸ್ಪರ್ಧೆಗಿಳಿದಿದ್ದವರು ಹಾಗೂ ಅವರನ್ನು ಅನುಸರಿಸುತ್ತಿರುವವರು ಇಂದು ಸಂಕಷ್ಟದಲ್ಲಿದ್ದಾರೆ. ಮಲ್ಯ ಅವರು ಶೀಘ್ರದಲ್ಲಿ ಭಾರತಕ್ಕೆ ಬಂದು ಸಾಲವನ್ನು ಮರುಪಾವತಿ ಮಾಡಬೇಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT