ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡಿನ ತಿರುಪುರದಲ್ಲಿ ದಲಿತರಿಗೆ ಕಲ್ಯಾಣ ಮಂಟಪವೂ ಸಿಗುವುದಿಲ್ಲ!

ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ....

ತಿರುಪುರ: ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ಆದರೆ ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ ಎನ್ನುವುದಕ್ಕೆ ತಮಿಳುನಾಡಿನ ತಿರುಪುರದ ಕಲ್ಯಾಣ ಮಂಟಪಗಳು ಸಾಕ್ಷಿಯಾಗಿವೆ.

ತಿರುಪುರದಲ್ಲಿರುವ ಕಂಗಾಯಂನಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ವಿವಾಗವಾಗುವುದಾದರೆ, ವಿವಾಹವಾಗುವವರನ್ನು ದಲಿತರೋ ಅಲ್ಲವೋ ಎಂಬುದನ್ನು ಖಚಿತ್ರಪಡಿಸಿಕೊಳ್ಳುತ್ತಾರೆ ಅಲ್ಲಿನ ಮಾಲೀಕರು, ನಂತರವಷ್ಟೆ ಉಳಿದ ವ್ಯವಹಾರ. ಒಂದು ವೇಳೆ ದಲಿತರಾಗಿದ್ದರೆ ಎಷ್ಟೇ ಹಣ ನೀಡಿದರೂ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವಂತಿಲ್ಲ.      
ಉತ್ತಮ ತಳಿಗಳ ಹೋರಿಗಳಿಗೆ ಪ್ರಸಿದ್ಧಿ ಪಡೆದಿರುವ ತಿರುಪುರದ ಕಂಗಾಯಂ, ಆಳವಾಗಿ ಬೇರೂರಿದೆ ಜಾತೀಯತೆಗೆ ಪ್ರಸಿದ್ಧಿಯಾಗುತ್ತಿದೆ. ಕಂಗಾಯಂ ನಲ್ಲಿ 20 ಕಲ್ಯಾಣ ಮಂಟಪಗಳಿದ್ದು, ಕೇವಲ ಎರಡು ಕಲ್ಯಾಣಾಮಂಟಪಗಳನ್ನು ಮಾತ್ರ ದಲಿತರಿಗೆ ಬಾಡಿಗೆ ನೀಡಲಾಗುತ್ತಿದೆ. ದಲಿತ ಕುಟುಂಬಗಳ ವಿವಾಹ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪವನ್ನು ಬಾಡಿಗೆ ನೀಡಿದ್ದಕ್ಕಾಗಿ ಅಲ್ಲಿನ ಮಾಲೀಕರು ಬಹಿಷ್ಕರಿಸಿದವರೇ ಈಗ ದಲಿತರಿಗೆ ವಿವಾಹ ಸಮಾರಂಭಗಳಿಗೆ ಸಭಾಂಗಣಗಳನ್ನು ನೀಡುತ್ತಿದ್ದಾರೆ ಎಂದು ದಲಿತ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT