ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡಿನ ತಿರುಪುರದಲ್ಲಿ ದಲಿತರಿಗೆ ಕಲ್ಯಾಣ ಮಂಟಪವೂ ಸಿಗುವುದಿಲ್ಲ!

ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ....

ತಿರುಪುರ: ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ಆದರೆ ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ ಎನ್ನುವುದಕ್ಕೆ ತಮಿಳುನಾಡಿನ ತಿರುಪುರದ ಕಲ್ಯಾಣ ಮಂಟಪಗಳು ಸಾಕ್ಷಿಯಾಗಿವೆ.

ತಿರುಪುರದಲ್ಲಿರುವ ಕಂಗಾಯಂನಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ವಿವಾಗವಾಗುವುದಾದರೆ, ವಿವಾಹವಾಗುವವರನ್ನು ದಲಿತರೋ ಅಲ್ಲವೋ ಎಂಬುದನ್ನು ಖಚಿತ್ರಪಡಿಸಿಕೊಳ್ಳುತ್ತಾರೆ ಅಲ್ಲಿನ ಮಾಲೀಕರು, ನಂತರವಷ್ಟೆ ಉಳಿದ ವ್ಯವಹಾರ. ಒಂದು ವೇಳೆ ದಲಿತರಾಗಿದ್ದರೆ ಎಷ್ಟೇ ಹಣ ನೀಡಿದರೂ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವಂತಿಲ್ಲ.      
ಉತ್ತಮ ತಳಿಗಳ ಹೋರಿಗಳಿಗೆ ಪ್ರಸಿದ್ಧಿ ಪಡೆದಿರುವ ತಿರುಪುರದ ಕಂಗಾಯಂ, ಆಳವಾಗಿ ಬೇರೂರಿದೆ ಜಾತೀಯತೆಗೆ ಪ್ರಸಿದ್ಧಿಯಾಗುತ್ತಿದೆ. ಕಂಗಾಯಂ ನಲ್ಲಿ 20 ಕಲ್ಯಾಣ ಮಂಟಪಗಳಿದ್ದು, ಕೇವಲ ಎರಡು ಕಲ್ಯಾಣಾಮಂಟಪಗಳನ್ನು ಮಾತ್ರ ದಲಿತರಿಗೆ ಬಾಡಿಗೆ ನೀಡಲಾಗುತ್ತಿದೆ. ದಲಿತ ಕುಟುಂಬಗಳ ವಿವಾಹ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪವನ್ನು ಬಾಡಿಗೆ ನೀಡಿದ್ದಕ್ಕಾಗಿ ಅಲ್ಲಿನ ಮಾಲೀಕರು ಬಹಿಷ್ಕರಿಸಿದವರೇ ಈಗ ದಲಿತರಿಗೆ ವಿವಾಹ ಸಮಾರಂಭಗಳಿಗೆ ಸಭಾಂಗಣಗಳನ್ನು ನೀಡುತ್ತಿದ್ದಾರೆ ಎಂದು ದಲಿತ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT