ದೇಶ

ತಮಿಳುನಾಡಿನ ತಿರುಪುರದಲ್ಲಿ ದಲಿತರಿಗೆ ಕಲ್ಯಾಣ ಮಂಟಪವೂ ಸಿಗುವುದಿಲ್ಲ!

Srinivas Rao BV

ತಿರುಪುರ: ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ಆದರೆ ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ ಎನ್ನುವುದಕ್ಕೆ ತಮಿಳುನಾಡಿನ ತಿರುಪುರದ ಕಲ್ಯಾಣ ಮಂಟಪಗಳು ಸಾಕ್ಷಿಯಾಗಿವೆ.

ತಿರುಪುರದಲ್ಲಿರುವ ಕಂಗಾಯಂನಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ವಿವಾಗವಾಗುವುದಾದರೆ, ವಿವಾಹವಾಗುವವರನ್ನು ದಲಿತರೋ ಅಲ್ಲವೋ ಎಂಬುದನ್ನು ಖಚಿತ್ರಪಡಿಸಿಕೊಳ್ಳುತ್ತಾರೆ ಅಲ್ಲಿನ ಮಾಲೀಕರು, ನಂತರವಷ್ಟೆ ಉಳಿದ ವ್ಯವಹಾರ. ಒಂದು ವೇಳೆ ದಲಿತರಾಗಿದ್ದರೆ ಎಷ್ಟೇ ಹಣ ನೀಡಿದರೂ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವಂತಿಲ್ಲ.      
ಉತ್ತಮ ತಳಿಗಳ ಹೋರಿಗಳಿಗೆ ಪ್ರಸಿದ್ಧಿ ಪಡೆದಿರುವ ತಿರುಪುರದ ಕಂಗಾಯಂ, ಆಳವಾಗಿ ಬೇರೂರಿದೆ ಜಾತೀಯತೆಗೆ ಪ್ರಸಿದ್ಧಿಯಾಗುತ್ತಿದೆ. ಕಂಗಾಯಂ ನಲ್ಲಿ 20 ಕಲ್ಯಾಣ ಮಂಟಪಗಳಿದ್ದು, ಕೇವಲ ಎರಡು ಕಲ್ಯಾಣಾಮಂಟಪಗಳನ್ನು ಮಾತ್ರ ದಲಿತರಿಗೆ ಬಾಡಿಗೆ ನೀಡಲಾಗುತ್ತಿದೆ. ದಲಿತ ಕುಟುಂಬಗಳ ವಿವಾಹ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪವನ್ನು ಬಾಡಿಗೆ ನೀಡಿದ್ದಕ್ಕಾಗಿ ಅಲ್ಲಿನ ಮಾಲೀಕರು ಬಹಿಷ್ಕರಿಸಿದವರೇ ಈಗ ದಲಿತರಿಗೆ ವಿವಾಹ ಸಮಾರಂಭಗಳಿಗೆ ಸಭಾಂಗಣಗಳನ್ನು ನೀಡುತ್ತಿದ್ದಾರೆ ಎಂದು ದಲಿತ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

SCROLL FOR NEXT