ಅರುಣ್ ಜೇಟ್ಲಿ 
ದೇಶ

ದೇಶವಿರೋಧಿ ಘೋಷಣೆ ಕುಗುತ್ತಿದ್ದವರಿಂದ ಜೈ ಹಿಂದ್ ಘೋಷಣೆ, ಬಿಜೆಪಿಯ ಸೈದ್ಧಾಂತಿಕ ಗೆಲುವು: ಜೇಟ್ಲಿ

ರಾಷ್ಟ್ರೀಯತೆ ವಿಷಯದಲ್ಲಿ ಸೈದ್ಧಾಂತಿಕ ಸವಾಲಿನಲ್ಲಿ ಮೊದಲ ಹಂತದ ಜಯ ಗಳಿಸಿರುವ ಬಿಜೆಪಿ ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವು ಜೈ ಹಿಂದ್ ಎಂಬ ಘೋಷಣೆ ಕೂಗುವಂತೆ ಮಾಡಿದೆ

ನವದೆಹಲಿ: ರಾಷ್ಟ್ರೀಯತೆ ವಿಷಯದಲ್ಲಿ ಸೈದ್ಧಾಂತಿಕ ಸವಾಲಿನಲ್ಲಿ ಮೊದಲ ಹಂತದ ಜಯ ಗಳಿಸಿರುವ ಬಿಜೆಪಿ, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವು ಜೈ ಹಿಂದ್ ಎಂಬ ಘೋಷಣೆ ಕೂಗುವಂತೆ ಮಾಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯ ಹೇಳುವುದರ ಬಗ್ಗೆ ನಡೆದಿದ್ದ ಚರ್ಚೆಗೆ ಪ್ರತಿಕ್ರಿಯೆಯಾಗಿ ಅರುಣ್ ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ.  ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ್ದ ಎಂಐಎಂ ಶಾಸಕ ಅಸಾವುದ್ದೀನ್ ಒವೈಸಿ ಜೈ ಹಿಂದ್ ಘೋಷಣೆ ಕೂಗಿದ್ದರು.  ಈ ಬೆಳವಣಿಗೆಗಳ ನಂತರ ಮಾತನಾಡಿರುವ ಜೇಟ್ಲಿ, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವರು ಜೈ ಹಿಂದ್ ಎಂಬ ಘೋಷಣೆ ಕೂಗುವಂತೆ ಮಾಡಿರುವುದು  ಸೈದ್ಧಾಂತಿಕ ಸವಾಲಿನಲ್ಲಿ ಬಿಜೆಪಿಗೆ ದೊರೆತ ಮೊದಲ ಜಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುವಜನರಲ್ಲಿ ದೇಶಭಕ್ತಿ ಮೂಡಿಸಲು ಭಾರತ್ ಮಾತಾ ಕಿ ಜೈ ರೀತಿಯ ಘೋಷಣೆಗಳನ್ನು ಹೇಳಿಕೊಡಬೇಕೆಂದು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದರು. ಇದನ್ನು ಎಂಐಎಂ ಶಾಸಕ ಅಸಾವುದ್ದೀನ್ ಒವೈಸಿ ವಿರೋಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT