ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 
ದೇಶ

ಉತ್ತರಾಖಂಡ ರಾಜಕೀಯ ಪರಿಸ್ಥಿತಿ ಆಡಳಿತ ಕುಸಿತಕ್ಕೆ ಒಂದು ಉತ್ತಮ ಉದಾಹರಣೆ: ಅರುಣ್ ಜೇಟ್ಲಿ

ಉತ್ತರಾಖಂಡದ ರಾಜಕೀಯ ಪರಿಸ್ಥಿತಿ ಆಡಳಿತ ಕುಸಿತಕ್ಕೆ ಒಂದು ಪಠ್ಯಪುಸ್ತಕ ರೀತಿಯ ಉದಾಹರಣೆಯಂತಿದೆ ಎಂದು ಕೇಂದ್ರ ವಿತ್ತ ಸಚಿವ...

ನವದೆಹಲಿ: ಉತ್ತರಾಖಂಡದ ರಾಜಕೀಯ ಪರಿಸ್ಥಿತಿ ಆಡಳಿತ ಕುಸಿತಕ್ಕೆ ಒಂದು ಪಠ್ಯಪುಸ್ತಕ ಉದಾಹರಣೆಯಂತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಸಾಂವಿಧಾನಿಕ ನೀತಿ ನಿಯಮಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಮಾರ್ಚ್ 18ರಂದು ವಿಧಾನಸಭೆ ಸ್ಪೀಕರ್ ಅನುಮೋದಿಸಿದ ಸ್ವಾಧೀನತೆ ಮಸೂದೆಯನ್ನು ಘೋಷಣೆ ಮಾಡಲಾಗಿತ್ತು. ವಿಧಾನಸಭೆಯ 67 ಮಂದಿ ಶಾಸಕರಲ್ಲಿ 35 ಮಂದಿ ಮುಖ್ಯಮಂತ್ರಿ ವಿರುದ್ಧ ಮತ ಹಾಕುವುದಾಗಿ ಸ್ಪೀಕರ್ ಗೆ ಬರೆದು ಕೊಟ್ಟಿದ್ದರು ಎಂದರು.

ನಮ್ಮ ದೇಶದ 68 ವರ್ಷಗಳ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಉತ್ತರಾಖಂಡದಲ್ಲಿ ಆದಂತಹ ರಾಜಕೀಯ ಪರಿಸ್ಥಿತಿ ಎಲ್ಲಿಯೂ ತಲೆದೋರಿರಲಿಲ್ಲ. ಭಾರತದಲ್ಲಿ ಸಂಸತ್ ವ್ಯವಸ್ಥೆ ನಾಶಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಜೇಟ್ಲಿ ಪಿಟಿಐ ಸುದ್ದಿಸಂಸ್ಥೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೂ ಮುನ್ನ ಪ್ರತಿಕ್ರಿಯೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT