ಮುಂಬೈ: ಮುಂಬೈ ಮೂಲದ ಉದ್ಯಮಿಯೊಬ್ಬರು ರು. 5 ಕೋಟಿ ಮೌಲ್ಯದ ಮನೆಯೊಂದನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ದಾನ ಮಾಡಿದ್ದಾರೆ.
ಗಣೇಶ್ ಗುಪ್ತಾ ಎಂಬ ಉದ್ಯಮಿ ದಶಾಶ್ವಮೇಧ್ ಘಾಟ್ನಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ಕಾಶಿ ವಿಶ್ವನಾಥ ದೇಗುಲದ ಟ್ರಸ್ಟ್ ಗೆ ಬರೆದುಕೊಟ್ಟಿದ್ದಾರೆ.
ಆಸ್ತಿಕರಾಗಿರುವ ಗುಪ್ತಾ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರು ತಮ್ಮ ಪೂರ್ವಜರ ಕಟ್ಟಡವನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ದಾನ ನೀಡಿದ್ದಾರೆ. ಈ ಕಟ್ಟಡವನ್ನು ನಾವು ಅತಿಥಿಗೃಹವನ್ನಾಗಿ ಮಾಡಲಿದೆ. ಈ ಬಗ್ಗೆ ಮುಂದಿನ ಯೋಜನೆಗಳನ್ನು ಟ್ರಸ್ಟಿಗಳ ಮುಂದಿಡಲಾಗುವುದು ಎಂದು ದೇವಾಲಯದ ಟ್ರಸ್ಟ್ ಅಧಿಕಾರಿಯಾಗಿರುವ ಪಿಎನ್ ದ್ವಿವೇದಿ ಹೇಳಿದ್ದಾರೆ.
38 ಕೋಣೆಗಳಿರುವ ಈ ಕಟ್ಟಡವು 3,050 ಚದರ ಅಡಿ ವಿಸ್ತಾರವಿದೆ. ಗುಪ್ತಾ ಅವರು ಮುಂಬೈನಲ್ಲೇ ವಾಸವಾಗಿದ್ದು, ದಶಕಗಳಿಂದ ಪೂರ್ವಜರ ಆ ಮನೆಗೆ ಬೀಗ ಹಾಕಲಾಗಿತ್ತು. ಆದ್ದರಿಂದ ಅದನ್ನು ದೇವಾಲಯಕ್ಕೆ ನೀಡಲು ತೀರ್ಮಾನಿಸಿದೆ. ಆ ಮನೆಯನ್ನು ನವೀಕರಣ ಮಾಡಿದ ನಂತರವೇ ದೇವಾಲಯಕ್ಕೆ ನೀಡಲಾಗುವುದು ಎಂದು ಗುಪ್ತಾ ಹೇಳಿದ್ದಾರೆ.
ಕಾಶಿ ವಿಶ್ವನಾಥನಿಗೆ ನಾನಿದನ್ನು ಅರ್ಪಿಸಿದ್ದೇನೆ. ನಾನು ಇಲ್ಲಿಯವರೆಗೆ ಗಳಿಸಿದ್ದೆಲ್ಲವೂ ಆ ದೇವರ ಅನುಗ್ರಹದಿಂದಲೇ. ಆದ್ದರಿಂದಲೇ ನನ್ನ ಪೂರ್ವಜರ ಆಸ್ತಿಯನ್ನು ಅವನ ಪಾದಕ್ಕೆ ಅರ್ಪಿಸಿದ್ದೇನೆ ಎಂದಿದ್ದಾರೆ ಗುಪ್ತಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos