ಗಣೇಶ್ ಗುಪ್ತಾ 
ದೇಶ

ರು. 5 ಕೋಟಿ ಮೌಲ್ಯದ ಮನೆಯನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ದಾನ ಮಾಡಿದ ಉದ್ಯಮಿ

ಮುಂಬೈ ಮೂಲದ ಉದ್ಯಮಿಯೊಬ್ಬರು ರು. 5 ಕೋಟಿ ಮೌಲ್ಯದ ಮನೆಯೊಂದನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ದಾನ...

ಮುಂಬೈ: ಮುಂಬೈ ಮೂಲದ ಉದ್ಯಮಿಯೊಬ್ಬರು ರು. 5 ಕೋಟಿ ಮೌಲ್ಯದ ಮನೆಯೊಂದನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ದಾನ ಮಾಡಿದ್ದಾರೆ.
ಗಣೇಶ್ ಗುಪ್ತಾ ಎಂಬ ಉದ್ಯಮಿ ದಶಾಶ್ವಮೇಧ್ ಘಾಟ್‌ನಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ಕಾಶಿ ವಿಶ್ವನಾಥ ದೇಗುಲದ ಟ್ರಸ್ಟ್ ಗೆ ಬರೆದುಕೊಟ್ಟಿದ್ದಾರೆ. 
ಆಸ್ತಿಕರಾಗಿರುವ ಗುಪ್ತಾ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರು ತಮ್ಮ ಪೂರ್ವಜರ ಕಟ್ಟಡವನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ದಾನ ನೀಡಿದ್ದಾರೆ. ಈ ಕಟ್ಟಡವನ್ನು ನಾವು ಅತಿಥಿಗೃಹವನ್ನಾಗಿ ಮಾಡಲಿದೆ. ಈ ಬಗ್ಗೆ ಮುಂದಿನ ಯೋಜನೆಗಳನ್ನು ಟ್ರಸ್ಟಿಗಳ ಮುಂದಿಡಲಾಗುವುದು ಎಂದು ದೇವಾಲಯದ ಟ್ರಸ್ಟ್ ಅಧಿಕಾರಿಯಾಗಿರುವ ಪಿಎನ್ ದ್ವಿವೇದಿ ಹೇಳಿದ್ದಾರೆ.
38 ಕೋಣೆಗಳಿರುವ ಈ ಕಟ್ಟಡವು 3,050 ಚದರ ಅಡಿ ವಿಸ್ತಾರವಿದೆ. ಗುಪ್ತಾ ಅವರು ಮುಂಬೈನಲ್ಲೇ ವಾಸವಾಗಿದ್ದು, ದಶಕಗಳಿಂದ ಪೂರ್ವಜರ ಆ ಮನೆಗೆ ಬೀಗ ಹಾಕಲಾಗಿತ್ತು. ಆದ್ದರಿಂದ ಅದನ್ನು ದೇವಾಲಯಕ್ಕೆ ನೀಡಲು ತೀರ್ಮಾನಿಸಿದೆ. ಆ ಮನೆಯನ್ನು ನವೀಕರಣ ಮಾಡಿದ ನಂತರವೇ ದೇವಾಲಯಕ್ಕೆ ನೀಡಲಾಗುವುದು ಎಂದು ಗುಪ್ತಾ  ಹೇಳಿದ್ದಾರೆ.  
ಕಾಶಿ ವಿಶ್ವನಾಥನಿಗೆ ನಾನಿದನ್ನು ಅರ್ಪಿಸಿದ್ದೇನೆ. ನಾನು ಇಲ್ಲಿಯವರೆಗೆ ಗಳಿಸಿದ್ದೆಲ್ಲವೂ ಆ ದೇವರ ಅನುಗ್ರಹದಿಂದಲೇ. ಆದ್ದರಿಂದಲೇ ನನ್ನ ಪೂರ್ವಜರ ಆಸ್ತಿಯನ್ನು ಅವನ ಪಾದಕ್ಕೆ ಅರ್ಪಿಸಿದ್ದೇನೆ ಎಂದಿದ್ದಾರೆ ಗುಪ್ತಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT