ಜಯಶೀಲರಾದ ರಾಜಗೋಪಾಲ್ (ಸಂಗ್ರಹ ಚಿತ್ರ) 
ದೇಶ

ಕೇರಳದಲ್ಲಿ ಇತಿಹಾಸ ನಿರ್ಮಿಸಿದ ಬಿಜೆಪಿ: ನೇಮಂ ಕ್ಷೇತ್ರದಲ್ಲಿ ರಾಜಗೋಪಾಲ್‌ ಗೆ ಜಯ

ಕೇರಳ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷ ತನ್ನ ಮೊದಲ ಚುನಾವಣಾ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದೆ.

ತಿರುವನಂತಪುರ: ಕೇರಳ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷ ತನ್ನ ಮೊದಲ ಚುನಾವಣಾ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದೆ.

ಎಲ್ ಡಿಎಫ್ ಮತ್ತು ಯುಡಿಎಫ್ ಪಕ್ಷಗಳ ಅಬ್ಬರದಲ್ಲಿ ಕಳೆದು ಹೋಗಿದ್ದ ಬಿಜೆಪಿ, ಕೇರಳದಲ್ಲಿ ಕೊನೆಗೂ ತನ್ನ ಖಾತೆ ತೆರೆದಿದೆ. ಕೇರಳದ ನೇಮಮ್‌ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ  ಓ.ರಾಜಗೋಪಾಲ್‌ ಅವರು ಗೆಲ್ಲುವ ಮೂಲಕ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದಾರೆ. 84 ವರ್ಷದ ರಾಜಗೋಪಾಲ ಅವರು ಸಿಪಿಐಎಂನ ವಿ ಸಿವನ್ ಕುಟ್ಟಿ ಅವರನ್ನು ಮಣಿಸಿ  ಇತಿಹಾಸ ನಿರ್ಮಿಸಿದ್ದಾರೆ.

ಉಳಿದಂತೆ ಎಲ್‌ಡಿಎಫ್ ಅಭ್ಯರ್ಥಿ ಕಡಕಂಪಳಿಳ ಸುರೇಂದ್ರನ್‌ ಅವರು ತಿರುವನಂತಪುರ ಜಿಲ್ಲೆಯ ಕಳಕೂಟ್ಟಂ ಕ್ಷೇತ್ರದಲ್ಲಿ ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಮುರಳೀಧರನ್‌ ಅವರನ್ನು  7,347 ಮತಗಳಿಂದ ಸೋಲಿಸಿದ್ದಾರೆ. ಸಿಪಿಎಂ ನ ವೀಣಾ ಜಾರ್ಜ್‌ ಅವರು ಅರಣ್ಮೂಲ ಕ್ಷೇತ್ರದಿಂದ ಜಯ ಗಳಿಸಿದ್ದು, ಕಾಂಗ್ರೆಸ್‌ ನಾಯಕ ಪಿ ಟಿ ಥಾಮಸ್‌ ಅವರು ತೃಕ್ಕಕರ ಕ್ಷೇತ್ರದಿಂದ ಜಯ  ಗಳಿಸಿದ್ದಾರೆ. ಸಿಪಿಎಂನ ವಿ ಜಾಯ್‌ ಅವರು ವರ್ಕಳದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ವರ್ಕಳ ಕಹಾರ್‌ ವಿರುದ್ಧ 2,386 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಚಟ್ಟನೂರು ಕ್ಷೇತ್ರದಿಂದ  ಹಾಲಿ ಶಾಸಕ ಜಿ ಎಸ್‌ ಜಯಲಾಲ್‌ಅವರು ಬಿಜೆಪಿ ಎದುರಾಳಿ ಬಿ ಬಿ ಗೋಪಕುಮಾರ್‌ ಅವರ ವಿರುದ್ಧ 34,407 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT