ಪುನರ್ವಸತಿಗಾಗಿ ಕಾಶ್ಮೀರ ಪಂಡಿತರ ಹೋರಾಟ (ಸಂಗ್ರಹ ಚಿತ್ರ) 
ದೇಶ

'ಕಾಶ್ಮೀರ ದೇವಾಲಯ ಮಸೂದೆ ಅಂಗೀಕಾರ, ಪಂಡಿತರ ವಾಪಸ್ಸಾಗುವುದಕ್ಕೆ ಪೂರಕ'

ವಿಧಾನಸಭೆಯಲ್ಲಿ ಕಾಶ್ಮೀರ ದೇವಾಲಯ ಹಾಗೂ ಪುಣ್ಯಕ್ಷೇತ್ರಗಳ ಮಸೂದೆ ಅಂಗೀಕಾರ ಪಂಡಿತರು ಕಣಿವೆಗೆ ಮರಳಲು ಪೂರ್ವಭಾವಿ ಸಿದ್ಧತೆ ಇದ್ದಂತೆ ಎಂದು ಸಂಘಟನೆಯೊಂದು ಅಭಿಪ್ರಾಯಪಟ್ಟಿದೆ.

ಜಮ್ಮು: ವಿಧಾನಸಭೆಯಲ್ಲಿ ಕಾಶ್ಮೀರ ದೇವಾಲಯ ಹಾಗೂ ಪುಣ್ಯಕ್ಷೇತ್ರಗಳ ಮಸೂದೆ ಅಂಗೀಕಾರ ಪಂಡಿತರ ಪುನರ್ವಸತಿ ವಿಷಯದಲ್ಲಿ ಮಹತ್ವದ ಪರಿಣಾಮ ಬೀರಲಿದ್ದು, ಪಂಡಿತರು ಕಣಿವೆಗೆ ಮರಳಲು ಪೂರ್ವಭಾವಿ ಸಿದ್ಧತೆ ಇದ್ದಂತೆ ಎಂದು ಕಾಶ್ಮೀರಿ ಪಂಡಿತರ ಪರವಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ಅಭಿಪ್ರಾಯಪಟ್ಟಿದೆ.
ಪಂಡಿತರ ಪುನರ್ವಸತಿ ಪರವಾಗಿ ಹೋರಾಟ ನಡೆಸುತ್ತಿರುವ ಪ್ರೇಮನಾಥ್ ಭಟ್ ಮೆಮೋರಿಯಲ್ ಟ್ರಸ್ಟ್(ಪಿಎನ್ ಬಿಎಂಟಿ) ನ ವಕ್ತಾರ ಆರ್ ಎಲ್ ಭಟ್, ಕಾಶ್ಮೀರದಲ್ಲಿರುವ ದೇವಾಲಯಗಳನ್ನು 'ಕೆಲವರ' ನಿಯಂತ್ರಣದಿಂದ ಹೊರತಂದು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಬೇಕು ಎಂಬುದು ಕಾಶ್ಮೀರ ದೇವಾಲಯ, ಪುಣ್ಯ ಕ್ಷೇತ್ರ ಮಸೂದೆಯ ಆಶಯವಾಗಿದೆ ಎಂದು ಹೇಳಿದ್ದಾರೆ.
ಮಸೂದೆ ಅಂಗೀಕಾರಕ್ಕೆ ಪಿಎನ್ ಬಿಎಂಟಿ ಸಂಘಟನೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದು, ಈಗ ಮಸೂದೆ ಅಂಗೀಕಾರ, ಪಂಡಿತರ ವಾಪಸ್ಸಾಗುವುದಕ್ಕೆ ಪೂರ್ವಭಾವಿ ಷರತ್ತು ವ್ಹಿಸಿದಂತಾಗಿದ್ದು, ಪಂಡಿತರ ಪುನರ್ವಸತಿ ವಿಷಯಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮಸೂದೆ ಅಂಗೀಕಾರದಿಂದ ಕಾಶ್ಮೀರ ಕಣಿವೆಯಲ್ಲಿ ಚುನಾಯಿತ ದೇವಾಲಯ ಸಮಿತಿಯೊಂದು ಅಸ್ತಿತ್ವಕ್ಕೆ ಬರಲು ಸಾಧ್ಯವಾಗುತ್ತದೆ. ಮಸೂದೆಯಲ್ಲಿನ ಅಂಶಗಳು ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರ ಮಂಡಳಿಯ ಆಶಯಗಳಿಗೆ ಪೂರಕವಾಗಿವೆ ಎಂದು ಆರ್ ಎಲ್ ಭಟ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT