ದೇಶ

ಅರ್ಚಕರ ದಾದಾಗಿರಿ ನಿಲ್ಲಬೇಕು: ತೃಪ್ತಿ ದೇಸಾಯಿ

Sumana Upadhyaya

ನಾಶಿಕ್: ದೇವಸ್ಥಾನಗಳಲ್ಲಿ ಅರ್ಚಕರು ದಾದಾಗಿರಿ ನಡೆಸುತ್ತಾರೆ ಎಂದು ಆರೋಪಿಸಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ, ನಾಶಿಕ್ ನ ಕಪಾಲೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಎರಡನೇ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಕಪಾಲೇಶ್ವರ ದೇವಾಲಯದ ಗರ್ಭಗುಡಿ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶವಿಲ್ಲ. ಅಲ್ಲಿ ಜಾತೀಯತೆ ಕೂಡ ಇದೆ. ಸಮಾಜದಲ್ಲಿ ಮಹಿಳೆ-ಪುರುಷರ ಮಧ್ಯೆ ಸಮಾನತೆಯಿರಬೇಕು. ಮಹಿಳೆಯರಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಇಂದು ನಾವು ದೇವಾಲಯದ ಗರ್ಭಗುಡಿ ಪ್ರವೇಶಿಸುತ್ತೇವೆ ಎಂದು ದೇಸಾಯಿ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.

SCROLL FOR NEXT