ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪೊಲೀಸರ ಎಫ್ ಐಆರ್ ಪ್ರತಿ (ಐಎಎನ್ ಎಸ್) 
ದೇಶ

ಗಾಜಿಯಾಬಾದ್ ಪೊಲೀಸರ ಪ್ರಕಾರ ರಾಹುಲ್ ಗಾಂಧಿ ಒಬ್ಬ ಡ್ರೈವರ್!

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಓರ್ವ ಡ್ರೈವರ್ ಅಂತೆ.. ಈ ಹಿಂದೆ ಗಾಜಿಯಾಬಾದ್ ನಲ್ಲಿ ಕಾರು ಚಾಲಕರಾಗಿದ್ದ ಅವರು ಇದೀಗ ದೆಹಲಿಯಲ್ಲಿ ರಾಜಕಾರಣ ಮಾಡುತ್ತಿದ್ದಾರಂತೆ.. ಅರೆ ಇದು ನಾವು...

ಗಾಜಿಯಾಬಾದ್‌: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಓರ್ವ ಡ್ರೈವರ್ ಅಂತೆ.. ಈ ಹಿಂದೆ ಗಾಜಿಯಾಬಾದ್ ನಲ್ಲಿ ಕಾರು ಚಾಲಕರಾಗಿದ್ದ ಅವರು ಇದೀಗ ದೆಹಲಿಯಲ್ಲಿ ರಾಜಕಾರಣ ಮಾಡುತ್ತಿದ್ದಾರಂತೆ.. ಅರೆ ಇದು ನಾವು ಹೇಳುತ್ತಿರುವ ಮಾತಲ್ಲ. ಬದಲಿಗೆ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ಪೊಲೀಸರ ಹೇಳಿಕೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ವಿಳಾಸ ಪತ್ತೆಗಾಗಿ ಹೋಗಿದ್ದ ಪೊಲೀಸರು ಅಲ್ವಿನ ಪಕ್ಕದ ಮನೆಯಾತ ನೀಡಿದ ಮಾಹಿತಿಯಾಧಾರದ ಮೇಲೆ ರಾಹುಲ್ ಗಾಂಧಿ ಅವರನ್ನು ಚಾಲಕರು ಎಂದು ಪ್ರಮಾಣಿಕೆ ನೀಡಿದ್ದಾರೆ. ಗಾಜಿಯಾಬಾದ್ ಪೊಲೀಸರ ಈ ಪ್ರಮಾದಿಂದಾಗಿ ಇದೀಗ ಉತ್ತರ ಪ್ರದೇಶ ಪೊಲೀಸರು ಸಾರ್ವಜನಿಕ ವಲಯದಲ್ಲಿ ತೀವ್ರ ಮುದುಗರಕ್ಕೀಡಾಗಿದ್ದು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.

ಆಗಿದ್ದೇನು: ಪ್ರಕರಣವೊಂದರ ಸಂಬಂಧ ಆರೋಪಿ ವ್ಯಕ್ತಿಯ ವಿಳಾಸ ಪಡೆಯಲು ತೆರಳಿದ್ದ ಶಿಪ್ರಾ ಸನ್‌ ಸಿಟಿಯ ಪೊಲೀಸ್‌ ಠಾಣೆಯ ಸಿಬಂಧಿಗಳು, ಸ್ಥಳೀಯರಿಂದ ಮಾಹಿತಿ ಕಲೆಹಾಕಿದ್ದಾರೆ. ಹೀಗೆ ಕಲೆಹಾಕಿದ ಮಾಹಿತಿಯನ್ವಯ ಎಫ್ ಐಆರ್ ದಾಖಲಿಸಿದ ಪೊಲೀಸರು ಎಫ್ ಐಆರ್ ನಲ್ಲಿ ಬಾಡಿಗೆದಾರನೊಬ್ಬನ ವೈಯಕ್ತಿಕ ವಿವರಗಳ ಪರಿಶೀಲನೆ ನಡೆಸಿದಾಗ, ಈ ವ್ಯಕ್ತಿ (ರಾಹುಲ್ ಗಾಂಧಿ)ಯು ಈ ಹಿಂದೆ ದೆಹಲಿಯಲ್ಲಿ ಮನೆ ನಂಬರ್ 12, ತುಘಲಕ್‌ ಲೇನ್‌ ವಿಳಾಸದಲ್ಲಿ ವಾಸವಾಗಿದ್ದ. ಈತನ ಹೆಸರು ರಾಹುಲ್ ಗಾಂಧಿ ಎಂದು ತಿಳಿದುಬಂದಿದ್ದು, ಈತ ದಿವಂಗತ ರಾಜಿವ್ ಗಾಂಧಿಯವರ ಮಗ  ಎಂದು ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ವೃತ್ತಿಯಲ್ಲಿ ರಾಜಕಾರಣಿಯಾಗಿದ್ದು, ಅವಿವಾಹಿತ ಎಂಬುದಾಗಿ ಪೊಲೀಸರು ದೃಢೀಕರಿಸಿದ್ದಾರೆ.

ಈ ವಿಚಾರ ಸ್ಥಳೀಯರಿಂದ ಕಾಡ್ಗಿಚ್ಚಿನಂತೆ ಹರಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮೂರ್ಖತನಕ್ಕೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಇನ್ನು ಈ ಪ್ರಕರಣದ ಬಗ್ಗೆ ಮಾತನಾಡಿರುವ ಶಿಪ್ರಾ ಸನ್ ಸಿಟಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೋರಕ್ ನಾಥ್ ಯಾದವ್ ಅವರು, ಪ್ರಕರಣದಲ್ಲಿ ಯಾರೋ ಕಿಡಿಗೇಡಿಗಳು ಪೊಲೀಸರನ್ನು ಖಂಡಿತಾ ಮೂರ್ಖರನ್ನಾಗಿಸಿದ್ದಾರೆ. ಹೀಗಾಗಿ ಆ ದುಷ್ಕರ್ಮಿಗಳು ಯಾರು ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆ ಯಾರೋ ಹೇಳಿದ ಮಾತನ್ನು ಕೇಳಿ ಎಫ್ ಐಆರ್ ದಾಖಲಿಸಿರುವ ಉತ್ತರ ಪ್ರದೇಶದ ಪೊಲೀಸರ ಸಾಮಾನ್ಯ ಜ್ಞಾನ ಎಷ್ಚಿದೆ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ 11,718 ಕೋಟಿ ರೂ.ವೆಚ್ಚದಲ್ಲಿ 'ಡಿಜಿಟಲ್ ಜನಗಣತಿ': ಕೇಂದ್ರ ಸಂಪುಟ ಅನುಮೋದನೆ!

'ಬೆದರಿಸುವ ಪ್ರಯತ್ನ ಬೇಡ': TN ಜಡ್ಜ್ ವಿರುದ್ಧದ INDIA ಕೂಟದ ಪದಚ್ಯುತಿ ಪ್ರಸ್ತಾವನೆ ಟೀಕಿಸಿದ ನಿವೃತ ನ್ಯಾಯಧೀಶರು!

ಕೇರಳ ನಟಿ ಮೇಲೆ ಅತ್ಯಾಚಾರ, ಹಲ್ಲೆ ಪ್ರಕರಣ: ಪಲ್ಸರ್ ಸುನಿ ಸೇರಿ ಎಲ್ಲಾ ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

ಗೃಹ ಲಕ್ಷ್ಮಿ ಹಣ: ಸಚಿವೆ ಲಕ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ರಾ? 'ಡಿನ್ನರ್ ಪಾಲಿಟಿಕ್ಸ್' ಬಗ್ಗೆ ಬಿಜೆಪಿ ಕಿಡಿ!

'ಏನೋ ತಪ್ಪಾಗಿದೆ...' ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ!

SCROLL FOR NEXT