ಮೃತದೇಹ ಸಾಗಿಸುತ್ತಿರುವ ಯುವಕರು
ನಬರಂಗಪುರ್: ಇಬ್ಬರು ಯುವಕರು ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಮೃತದೇಹವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿರುವ ಆಘಾತಕಾರಿ ಘಟನೆ ಒಡಿಶಾದ ನಬರಂಗಪುರ್ ಜಿಲ್ಲೆಯ ಜಾರಿಗಾಂವ್ ಬ್ಲಾಕ್ ನಲ್ಲಿ ನಡೆದಿದೆ.
ಭರಮುಂಡಾ ಗ್ರಾಮದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಮೃತ ದೇವನ್ನು ಜಾರಿಗಾಂವ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ಬಳಿಕ ಇಬ್ಬರು ಯುವಕರು ಪ್ಲಾಸ್ಟಿಕ್ ನಿಂದ ಸುತ್ತಿದ ಮಹಿಳೆಯ ಮೃತದೇಹವನ್ನು ಬೈಕ್ ನ ಹಿಂಬದಿ ಕಟ್ಟಿಕೊಂಡು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಡತನ ಅಥವಾ ವಾಹನಗಳ ಕೊರತೆಯ ಹಿನ್ನೆಲೆಯಲ್ಲಿ ಯುವಕರು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಬರಂಗಪುರ್ ಜಿಲ್ಲಾಧಿಕಾರಿ ರಶ್ಮಿತಾ ಪಾಂಡ ಅವರು, ಆ ಪ್ರದೇಶದಲ್ಲಿ ಮೃತದೇಹ ತೆಗೆದುಕೊಂಡು ಹೋಗಲು ವಾಹನಗಳ ಸೌಲಭ್ಯ ಇದೆ. ಜಾರಿಗಾಂವ್ ನಿಂದ 20 ಕಿ.ಮೀ ದೂರದಲ್ಲಿರುವ ಉಮರಕೋಟ್ ನಲ್ಲಿ ಮೃತದೇಹ ಸಾಗಿಸಲು ಎರಡು ವಾಹನಗಳಿವೆ. ಆದರೆ ಅವರು ಏಕೆ ಹಾಗೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos