ದೇಶ

ಹಲ್ಲೆ ಆರೋಪ: ಎಎಪಿಯ ಮತ್ತೊಬ್ಬ ಶಾಸಕನ ಬಂಧನ

Lingaraj Badiger
ನವದೆಹಲಿ: ಛಠ್‌ ಪೂಜಾ ಆಚರಣೆ ವೇಳೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಆಮ್ ಆದ್ಮಿ ಪಕ್ಷದ ಕಿರಾರಿ ಕ್ಷೇತ್ರದ ಶಾಸಕ ರಿತುರಾಜ್‌ ಗೋವಿಂದ್‌ ಅವರನ್ನು ಬಂಧಿಸಿದ್ದಾರೆ.
ಕಳೆದ ನವೆಂಬರ್ 3ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾರನ್ನು ವಶಕ್ಕೆ ಪಡೆದ ಮೂರು ದಿನಗಳಲ್ಲೇ ಎಎಪಿಯ ಮತ್ತೊಬ್ಬ ಶಾಸಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಛಠ್‌ ಪೂಜಾ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಶಾಸಕ ರಿತುರಾಜ್‌ ಗೋವಿಂದ್‌ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ ನಂತರ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಎಂ.ಎನ್.ತಿವಾರಿ ಅವರು ಖಚಿತಪಡಿಸಿದ್ದಾರೆ.
ಈ ಬಗ್ಗೆ ಆಪ್ ಮುಖಂಡರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
SCROLL FOR NEXT