ಭೋಪಾಲ್ ಎನ್'ಕೌಂಟರ್: ಹತ್ಯೆಯಾದ ಶಂಕಿತ ಸಿಮಿ ಉಗ್ರರಿಗೆ ಹುತಾತ್ಮರ ಪಟ್ಟ! 
ದೇಶ

ಭೋಪಾಲ್ ಎನ್'ಕೌಂಟರ್: ಹತ್ಯೆಯಾದ ಶಂಕಿತ ಸಿಮಿ ಉಗ್ರರಿಗೆ ಹುತಾತ್ಮರ ಪಟ್ಟ!

ಭೋಪಾಲ್ ನಲ್ಲಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಯಾದ 8 ಶಂಕಿತ ಸಿಮಿ ಉಗ್ರರನ್ನು ಹುತಾತ್ಮರೆಂದು ಬಿಂಬಿಸಲಾಗಿದೆ...

ಭೋಪಾಲ್: ಭೋಪಾಲ್ ನಲ್ಲಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಯಾದ 8 ಶಂಕಿತ ಸಿಮಿ ಉಗ್ರರನ್ನು ಹುತಾತ್ಮರೆಂದು ಬಿಂಬಿಸಲಾಗಿದೆ.

ಬಂಧಿತರಾಗಿದ್ದ 8 ಮಂದಿ ಶಂಕಿತ ಸಿಮಿ ಉಗ್ರರು ಅ.31 ರಂದು ಭೋಪಾಲ್ ಕೇಂದ್ರೀಯ ಕಾರಾಗೃಹದಲ್ಲಿ ಪೇದೆ ರಾಮಶಂಕರ್ ಯಾದವ್ ಎಂಬುವವರ ಕತ್ತು ಸೀಳಿ ಜೈಲಿನ ಗೋಡೆ ಹಾರಿ ಪರಾರಿಯಾದ್ದರು. ಶಂಕಿತ ಉಗ್ರರು ಪರಾರಿಯಾದ ಕೇವಲ 8 ಗಂಟೆಗಳಲ್ಲಿ ಅವರನ್ನು ಪತ್ತೆ ಹಚ್ಚಿದ್ದ ಪೊಲೀಸರು ಎನ್ ಕೌಂಟರ್ ನಲ್ಲಿ ಎಲ್ಲಾ 8 ಮಂದಿಯನ್ನು ಹತ್ಯೆ ಮಾಡಿತ್ತು.

ಹತ್ಯೆಯಾದ 8 ಸಿಮಿ ಉಗ್ರರ ಪೈಕಿ 5 ಮಂದಿ ಅಮ್ಜದ್ ಖಾನ್, ಝಾಕೀರ್ ಹುಸೇನ್, ಮೊಹಮ್ಮದ್ ಸಾಲಿಕ್, ಶೇಖ್ ಮೆಹಬೂಬ್ ಮತ್ತು ಅಕೀಲ್ ಖಿಲ್ಜಿ ಎಂಬುವವರನ್ನು ಹುಟ್ಟೂರಾದ ಖಂಡ್ವಾ ಜಿಲ್ಲೆಯ ಅಬಾನಾ ನಿದಿಯ ಸಮೀಪವಿರುವ ಬಡಾ ಕಬರಿಸ್ಥಾನದಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿತ್ತು.

ಇದೀಗ ಆ ಗೋರಿಗಳ ಮೇಲೆ ಸ್ಥಾಪನೆ ಮಾಡಲಾಗಿರುವ ಫಲಕದಲ್ಲಿ ಹುತಾತ್ಮರೆಂದು ಬರೆದಿರುವುದು ಬಹಿರಂಗಗೊಂಡಿದೆ.

ಹತ್ಯೆಯಾದ ಸಿಮಿ ಉಗ್ರರ ಶವಯಾತ್ರೆ ಸಂದರ್ಭದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಆ ಸಂದರ್ಭದಲ್ಲೂ ಶಂಕಿತ ಉಗ್ರರನ್ನು ಹುತಾತ್ಮರೆಂದು ಘೋಷಿಸಲಾಗಿತ್ತು. ಶವಯಾತ್ರೆ ವೇಳೆ 700 ಮಂದಿ ಪೊಲೀಸರು ನಾಗರೀಕ ವಸ್ತ್ರಗಳನ್ನು ತೊಟ್ಟು ಜನರ ಮೇಲೆ ಕಣ್ಗಾವಲಿಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT