ಮಲಯಾಳಂ ನಟ ಮೋಹನ್ ಲಾಲ್ (ಸಂಗ್ರಹ) 
ದೇಶ

ನಟ ಮೋಹನ್ ಲಾಲ್ ನಿವಾಸದಲ್ಲಿ ದಂತ ದಾಸ್ತಾನು: ತ್ವರಿತ ತನಿಖೆಗೆ ಆದೇಶ

2011ರಲ್ಲಿ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಆನೆಯ ದಂತವನ್ನು ಇಟ್ಟುಕೊಂಡಿದ್ದರು ಎಂಬ ಕಾರಣಕ್ಕೆ ಮಲಯಾಳಂ ಚಲನಚಿತ್ರ,...

ಕೊಚ್ಚಿ: 2011ರಲ್ಲಿ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಆನೆಯ ದಂತವನ್ನು ಇಟ್ಟುಕೊಂಡಿದ್ದರು ಎಂಬ ಕಾರಣಕ್ಕೆ ಮಲಯಾಳಂ ಚಲನಚಿತ್ರ ನಟ ಮೋಹನ್ ಲಾಲ್ ವಿರುದ್ಧ ತ್ವರಿತ ಪರಿಶೀಲನೆ ತನಿಖೆ ನಡೆಸುವಂತೆ ಕೇರಳದ ಜಾಗ್ರತ ನ್ಯಾಯಾಲಯ ಆದೇಶಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಹಾಗೂ ಶಾಸಕ ತಿರುವನಂಚೂರು ರಾಧಾಕೃಷ್ಣನ್ ಹಾಗೂ ಇವರ ಜೊತೆಗೆ ನಟನಿಗೆ ದಂತವನ್ನು ಉಡುಗೆಯಾಗಿ ನೀಡಿದ ಮತ್ತಿಬ್ಬರಾದ ಪಿ.ಎಂ.ಕೃಷ್ಣ ಕುಮಾರ್ ಮತ್ತು ಕೆ.ಜೆ.ಕೃಷ್ಣ ಕುಮಾರ್ ಅವರನ್ನು ಕೂಡ ವಿಚಾರಣೆ ನಡೆಸಲಾಗುತ್ತದೆ.
ಮೋಹನ್ ಲಾಲ್ ಅವರ ಮನೆಯಿಂದ ದಂತವನ್ನು ವಶಪಡಿಸಿಕೊಂಡ ನಂತರ ಕೂಡ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಆರೋಪ ರಾಧಾಕೃಷ್ಣನ್ ಅವರ ಮೇಲಿದೆ.
2011ರಲ್ಲಿ ಆದಾಯ ತೆರಿಗೆ ಇಲಾಖೆಯವರು ಮೋಹನ್ ಲಾಲ್ ಮನೆ ಮೇಲೆ ದಾಳಿ ನಡೆಸಿದಾಗ ದಂತ ಕಂಡುಬಂದಿದೆ. ಆದಾಯ ತೆರಿಗೆ ಇಲಾಖೆ ವಿಷಯವನ್ನು ಕೇರಳ ಅರಣ್ಯ ಇಲಾಖೆಗೆ ತಲುಪಿಸಿತ್ತು. ಆಗ ಅರಣ್ಯ ಇಲಾಖೆ,1972ರ ವನ್ಯಮೃಗ ಸಂರಕ್ಷಣೆ ಕಾಯ್ದೆಯಡಿ ಅಕ್ರಮವಾಗಿ ದಂತ ಇಟ್ಟುಕೊಂಡಿರುವುದಕ್ಕೆ ಕೇಸು ದಾಖಲಿಸಿತ್ತು.
ಆದರೆ ನಟನ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಅದಕ್ಕೆ ನ್ಯಾಯಾಲಯ ರಾಜ್ಯ ಜಾಗ್ರತ ಮತ್ತು ಭ್ರಷ್ಟಾಚಾರ ವಿರೋಧಿ ದಳಕ್ಕೆ ಆದೇಶ ನೀಡಿ ತ್ವರಿತ ವಿಚಾರಣೆ ನಡೆಸುವಂತೆ ಮತ್ತು ಡಿಸೆಂಬರ್ 12ರೊಳಗೆ ವರದಿ ನೀಡುವಂತೆ ಆದೇಶ ನೀಡಿದೆ.
ಈ ಮಧ್ಯೆ ಮೋಹನ್ ಲಾಲ್ ಅವರು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದು ತಮ್ಮ ಮೇಲಿನ ಕೇಸಿನ ವಿಚಾರದಲ್ಲಿ ಕಾನೂನು ವಿನಾಯ್ತಿ ನೀಡುವಂತೆ ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT