ಸಾಂದರ್ಭಿಕ ಚಿತ್ರ 
ದೇಶ

ಕೆಚ್ಚದೆಯಿಂದ ಹೋರಾಡಿ ಸಿಂಹದ ಬಾಯಿಂದ ತಮ್ಮ ಹಸುಗಳನ್ನು ರಕ್ಷಿಸಿದ ಸಹೋದರಿಯರು

ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಅವುಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದ ಸಿಂಹದ ವಿರುದ್ಧ ಇಬ್ಬರು ಹೋರಾಡಿದ ಸಹೋದರಿಯರು ವೀರಾವೇಶ .....

ಅಹಮದಾಬಾದ್: ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಅವುಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದ ಸಿಂಹದ ವಿರುದ್ಧ ಇಬ್ಬರು ಹೋರಾಡಿದ ಸಹೋದರಿಯರು ವೀರಾವೇಶ ಮೆರೆದಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

19 ವರ್ಷದ ಸಂತೊಕ್ ರಬರಿ ಹಾಗೂ 18 ವರ್ಷದ ಮೈಯಾ ಈ ಸಾಹಸ ತೋರಿದ ಯುವತಿಯರು. ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗೀರ್ ಅರಣ್ಯ ಪ್ರದೇಶದ ತುಳಸಿ ಶ್ಯಾಮ್ ಪ್ರದೇಶದ ನಿವಾಸಿಗಳಾಗಿರುವ ಇವರು, ಜಾನುವಾರುಗಳನ್ನು ಮೇಯಿಸುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು.

ಇವರ ತಂದೆ ಪಾರ್ಶ್ವವಾಯು ಪೀಡಿತಾರಾಗಿದ್ದಾರೆ. ಹೀಗಾಗಿ ತಂದೆಯ ಕೆಲಸವನ್ನು ಈ ಇಬ್ಬರು ಯುವತಿಯರು ಮಾಡುತ್ತಿದ್ದರು.

ಅಕ್ಟೋಬರ್ 9ರಂದು ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಅವುಗಳ ಮೇಲೆ ಸಿಂಹವೊಂದು ದಾಳಿ ಮಾಡಲು ಮುಂದಾಗಿದೆ. ಆ ವೇಳೆ ಈ ಸಹೋದರಿಯರು ಧೈರ್ಯಗೆಡದೇ ಕೈಯಲ್ಲಿದ್ದ ಕಟ್ಟಿಗೆಯಿಂದ ಬೆದರಿಸಿದ್ದಾರೆ. ಸಿಂಹ ಹೆದರಿಕೆಯಿಂದ ಸ್ವಲ್ಪ ಹಿಂದೆ ಸರಿದಿದೆ. ನಂತರ ಇಬ್ಬರು ತಮ್ಮ ಬಳಿಯಿದ್ದ ಕೋಲುಗಳಿಂದ ಸಿಂಹವನ್ನು ಬೆದರಿಸಿ ಹಿಮ್ಮೆಟ್ಟಿಸಿದ್ದಾರೆ. ಇದರಿಂದ ಸಿಂಹ ಹೆದರಿ ಮರಳಿ ಹೋಗಿದೆ.

ಈ ಪ್ರಾಂತ್ಯದಲ್ಲಿ ಸಿಂಹಗಳ ಓಡಾಟ ಹೆಚ್ಚಿದೆ. ಆದರೆ ಸಿಂಹಗಳು ಮನುಷ್ಯರಿಗೆ ತುಂಬಾ ಹೆದರುವುದರಿಂದ ಯುವತಿಯರ ಬೆದರಿಕೆಕೆ ಅದು ಓಡಿ ಹೋಗಿದೆ ಎಂದು ವನ್ಯ ಜೀವಿ ತಕ್ಷರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT