ಸಾಂದರ್ಭಿಕ ಚಿತ್ರ 
ದೇಶ

ಹೇರ್ ಕ್ಲಿಪ್ ಕಾಣೆಯಾಗಿದ್ದಕ್ಕೆ 12 ವರ್ಷದ ಬಾಲಕಿಗೆ ಶಿಕ್ಷೆ ನೀಡಿದ ಶಿಕ್ಷಕಿ

ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕಿ ಮತ್ತು ಆಕೆಯ ಮದುವೆಯಾದ ಮಗಳು ತಮ್ಮ ಜೊತೆ ವಾಸಿಸುತ್ತಿದ್ದ ಸಂಬಂಧಿಕರೊಬ್ಬರ...

ತಂಜಾವೂರು: ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕಿ ಮತ್ತು ಆಕೆಯ ಮದುವೆಯಾದ ಮಗಳು ತಮ್ಮ ಜೊತೆ ವಾಸಿಸುತ್ತಿದ್ದ ಸಂಬಂಧಿಕರೊಬ್ಬರ 12 ವರ್ಷದ ಹುಡುಗಿಗೆ ಬಿಸಿಯಾದ ಕಬ್ಬಿಣದ ರಾಡ್ ನಿಂದ ಹೊಡೆದ ಘಟನೆ ತಂಜಾವೂರಿನಲ್ಲಿ ನಡೆದಿದೆ. ಕೂದಲಿಗೆ ಹಾಕುವ ಕ್ಲಿಪ್ಪನ್ನು ತೆಗೆದುಕೊಂಡಿದ್ದಾಳೆ ಎಂದು ಯೋಚಿಸಿ ಹೀಗೆ ಕಠಿಣ ಶಿಕ್ಷೆ ನೀಡಿದ್ದಾರೆ.
ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆಯೊಂದು ಬರುತ್ತದೆ. ಪಾಪನಾಸನಮ್ ನಲ್ಲಿ ಮನೆಗೆಲಸಕ್ಕಿರುವ ಹುಡುಗಿಯೊಬ್ಬಳನ್ನು ಮನೆಯವರು ಸರಿಯಾಗಿ ನೋಡಿಕೊಳ್ಳುವುದಿಲ್ಲ. ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆಂದು. ಈ ಕರೆಯ ಮೇರೆಗೆ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳ ತಂಡ ಮೊನ್ನೆ ಆಗಸ್ಟ್ 27ರಂದು ಮನೆಗೆ ಭೇಟಿ ನೀಡಿದಾಗ ಹುಡುಗಿಯ ಎಡಗೈಯಲ್ಲಿ ಮೂರು ಗಾಯಗಳಾಗಿದ್ದವು.
ವಿಚಾರಣೆ ನಡೆಸಿದಾಗ, ಬಾಲಕಿಯ ತಂದೆ ತಮಿಳು ನಾಡಿನ ಕರೂರು ಜಿಲ್ಲೆಯ ಗೌಂದನ್ ಪಟ್ಟಿಯವರಾಗಿದ್ದು, ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಕೆಯ ತಾಯಿ ಮರು ಮದುವೆಯಾಗಿದ್ದರು. ಮಗಳನ್ನು ಸಂಬಂಧಿಕರಾದ ಶಾಲಾ ಶಿಕ್ಷಕಿ ರಹಿನಿ ಹತ್ತಿರ ಬಿಟ್ಟರು. ರಾಹಿನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿಯೇ ಬಾಲಕಿ 7ನೇ ತರಗತಿಯಲ್ಲಿ ಓದುತ್ತಿದ್ದಳು. 
ಕೆಲ ದಿನಗಳ ಹಿಂದೆ ರಾಹಿನಿ ಮನೆಯಿಂದ ಹೇರ್ ಕ್ಲಿಪ್ ವೊಂದು ಕಾಣೆಯಾಗಿತ್ತು. ರಾಹಿಣಿ ಮತ್ತು ಅವರ ಮಗಳು ಸರಣ್ಯ ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದ್ದಾರೆ. ಹೇರ್ ಕ್ಲಿಪ್ ಸಿಗದಿದ್ದಾಗ ಇಬ್ಬರೂ ಸೇರಿ ಬಾಲಕಿಗೆ ಹೊಡೆದಿದ್ದಾರೆ.
ಅಧಿಕಾರಿಗಳು ವಿಚಾರಿಸುವಾಗ ಆರಂಭದಲ್ಲಿ ಬಾಲಕಿ ಸತ್ಯ ಹೇಳಲು ಭಯದಿಂದ ನಿರಾಕರಿಸಿದ್ದಾಳೆ. ಕುಕ್ಕರ್ ತಾಗಿ ಗಾಯವಾಗಿದೆ ಎಂದು ಹೇಳಿದ್ದಾಳೆ. ನಂತರ ತನಗೆ ಹೊಡೆದಿದ್ದಾರೆ ಎಂದು ಹೇಳಿದ್ದಾಳೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಸಮಿತಿ ಅಧಿಕಾರಿಗಳು ಆಕೆಯನ್ನು ತಂಜಾವೂರಿನ ಸರ್ಕಾರಿ ಮನೆಯಲ್ಲಿ ಆಶ್ರಯ ಕಲ್ಪಿಸುವಂತೆ ಹೇಳಿದ್ದಾರೆ. ಕೇಸು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT