ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

9/11 ನ್ಯೂಯಾರ್ಕ್ ದಾಳಿ: ಸಂತ್ರಸ್ಥರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

9/11 ನ್ಯೂಯಾರ್ಕ್ ಮೇಲಿನ ಉಗ್ರರ ದಾಳಿ ನಡೆದು ಇಂದಿಗೆ 15 ವರ್ಷಗಳು ಕಳೆದಿದ್ದು, ದಾಳಿ ವೇಳೆ ಮರಣವನ್ನಪ್ಪಿದ್ದ ಸಂತ್ರಸ್ಥರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ...

ನವದೆಹಲಿ: 9/11 ನ್ಯೂಯಾರ್ಕ್ ಮೇಲಿನ ಉಗ್ರರ ದಾಳಿ ನಡೆದು ಇಂದಿಗೆ 15 ವರ್ಷಗಳು ಕಳೆದಿದ್ದು, ದಾಳಿ ವೇಳೆ ಮರಣವನ್ನಪ್ಪಿದ್ದ ಸಂತ್ರಸ್ಥರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಅವರು  1893ರಲ್ಲಿ ಇದೇ ದಿನ ಐತಿಹಾಸಿಕ ಭಾಷಣವನ್ನು ಮಾಡಿದ್ದರು. ವಿವೇಕಾನಂದ ಅವರ ಈ ಭಾಷಣ ಭಾರತ ಶಕ್ತಿಯನ್ನು ಹೆಚ್ಚಿಸಿತ್ತು. ಭಾರತದ ಶ್ರೀಮಂತ ಸಂಸ್ಕೃತಿ, ಸೋದರತ್ವ, ಬಾಂಧವ್ಯ, ಸಾರ್ವತ್ರಿಕ, ಸಾಮರಸ್ಯದ ಶಕ್ತಿಯನ್ನು ಹೆಚ್ಚಿಸಿತ್ತು.
 
ಇಂತಹ ಐತಿಹಾಸಿಕ ದಿನದಂದೇ ಮನಸ್ಸಿಗೆ ಘಾಸಿಯಾದ ಮತ್ತೊಂದು ದಿನವನ್ನೂ ನೆನೆಯುವಂತಾಗಿದೆ. ನ್ಯೂಯಾರ್ಕ್ ನ ಅವಳಿ ಗೋಪುರಗಳ ಮೇಲೆ 9/11 ರಂದು ದಾಳಿ ನಡೆಸಲಾಗಿತ್ತು. ದಾಳಿ ವೇಳೆ 2,750ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮರಣವನ್ನಪ್ಪಿದ್ದವರಿಗೆ ಇಂದು ನಾವು ಶ್ರದ್ಧಾಂಜಲಿ ಅರ್ಪಿಸಬೇಕಾಗಿದೆ ಎಂದು ಹೇಳಿದ್ದಾರೆ.

2001 ಸೆ.11 ರಂದು ಅಲ್-ಖೈದಾ ಉಗ್ರ ಸಂಘಟನೆಯ ಗುಂಪು ನ್ಯೂಯಾರ್ಕ್ ಮೇಲೆ ದಾಳಿ ನಡೆಸಿತ್ತು. 2 ಶತಮಾನಗಳ ಅವಧಿಯಲ್ಲಿ ನಡೆದ ಮೊದಲ ವಿದೇಶಿ ದಾಳಿ ಇದಾಗಿತ್ತು. ಈ ದಾಳಿಯು ಇತರೆ ರಾಷ್ಟ್ರಗಳು ಬೆಚ್ಚಿಬೀಳುವಂತೆ ಮಾಡಿತ್ತು.

ಉಗ್ರರು ಅಪಹರಿಸಿದ್ದ ಎರಡು ಪ್ರಯಾಣಿಕ ವಿಮಾನಗಳು ವರ್ಲ್ಡ್ ಟ್ರೇಡ್ ಸೆಂಟರ್ ನ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಲೆಕ್ಕವಿಲ್ಲದಷ್ಟು ಜನರು ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದರು. ಇದೀಗ ವರ್ಲ್ಡ್ ಟ್ರೇಡ್ ಸೆಂಟರ್ ಸಂಪೂರ್ಣವಾಗಿ ಪುನರ್ ನಿರ್ಮಾಣವಾಗಿದ್ದು, ಆ ಸ್ಥಳದಲ್ಲಿ ಸೆ.11 ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ, ಜಗತ್ತಿನ ಅತ್ಯಂತ ದುಬಾರಿ ರೈಲು ನಿಲ್ದಾಣ ಇನ್ನಿತರೆ ಕಲಾ ಕೇಂದ್ರ, ಕಚೇರಿಗಳು ನಿರ್ಮಾಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT