ಸಾಂದರ್ಭಿಕ ಚಿತ್ರ 
ದೇಶ

ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತಿಹೆಚ್ಚಿನ ಯುವ ಸಮುದಾಯ

ದೇಶದಲ್ಲೇ ಅತಿ ಹೆಚ್ಚಿನ ಯುವ ಜನತೆ ಇರುವುದು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಉತ್ತರ ಪ್ರದೇಶ: ದೇಶದಲ್ಲೇ ಅತಿ ಹೆಚ್ಚಿನ ಯುವ ಜನತೆ ಇರುವುದು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಎಂದು ಸಮೀಕ್ಷೆಯೊಂದು ತಿಳಿಸಿದೆ.

2011ರ ಗಣತಿಯ ಪ್ರಕಾರ ಕೇರಳ ಮತ್ತು ತಮಿಳುನಾಡು ಹೆಚ್ಚಿನ ಮಧ್ಯ ವಯಸ್ಕರು ಹೊಂದಿತ್ತು, ಆದರೆ ಇತ್ತೀಚೆಗೆ ಬೆಂಗಳೂರು ಮೂಲದ ಥಿಂಕ್ ಥ್ಯಾಂಕ್ ತಕ್ಷಶಿಲಾ ಸಂಸ್ಥೆ ನಡೆಸಿದ ಸಮೀಕ್ಷೆ ಆಧಾರದ ಮೇಲೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಹೆಚ್ಚಿನ ಯುಜನತೆಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಜನಸಂಖ್ಯೆಯನ್ನು ಎರಡು ಸಮಾನ ಭಾಗವಾಗಿ ವಿಭಜಿಸಿದಾಗ ಅದರಿಂದ ಯುವ ಜನತೆಯ ವಯಸ್ಸು ತಿಳಿದು, ಎಷ್ಟು ಪ್ರಮಾಣದಲ್ಲಿ ಯುವ ಜನತೆ ಇದೆ ತಿಳಿದು ಬರುತ್ತದೆ. ಕಿರಿಯ ವಯಸ್ಸು ದೇಶದಲ್ಲಿ  ಸಂಖ್ಯೆಯ ಯುವಕರಿದ್ದಾರೆ ಎಂದು ತಿಳಿಸುತ್ತದೆ.

2001 ರಲ್ಲಿ 22.51 ರಷ್ಟು ಇದ್ದದ್ದು, 2011 ರ ವೇಳೆಗೆ 24 ರಷ್ಟಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. 2050 ರ ವೇಳೆಗೆ ಮಧ್ಯಮ ವಯಸ್ಕರ ವಯಸ್ಸು 37 ವರ್ಷಕ್ಕೆ ನಿಗದಿಯಾಗಲಿದೆ.

ಚೀನಾದಲ್ಲಿ 46 ವರ್ಷದೊಳಗಿನ ಜನಸಂಖ್ಯೆಯನ್ನು ಮಧ್ಯ ವಯಸ್ಕರು ಎಂದು ಹೇಳಲಾಗುತ್ತದೆ,

ಮಧ್ಯ ವಯಸ್ಕರ  ವಯಸ್ಸನ್ನು ಗುರುತಿಸುವ ಪ್ರಮಾಣ ಭಾರತದಲ್ಲೇ ವಿಭಿನ್ನವಾಗಿದೆ. ಕೇರಳ 31 ವರ್ಷದೊಳಗಿನವರನ್ನು ಮಧ್ಯ ವಯಸ್ಕರ ಎಂದರೇ, ಅರ್ಜೆಂಟೀನಾದಲ್ಲಿ 30.8 ವಯಸ್ಸಿನವರನ್ನು ಮಧ್ಯ ವಯಸ್ಕರು ಎಂದು ಹೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ 20 ವರ್ಷಕ್ಕೆ ನಿಗದಿ ಪಡಿಸಲಾಗಿದೆ. ಅದೇ ರೀತಿ ಕೀನ್ಯಾದಲ್ಲಿ 18 ವರ್ಷ 9 ತಿಂಗಳಿಗೆ ವಯಸ್ಸನ್ನು ನಿಗದಿ ಮಾಡಲಾಗಿದೆ.

ಮಧ್ಯ ವಯಸ್ಕರ ಪ್ರಮಾಣ ಹಾಗೂ ಅಭಿವೃದ್ಧಿಯ ನಡುವೆ ಪರಸ್ಪರ ಸಂಬಂಧವಿದೆ.  ಯುವ ಜನತೆ ಪ್ರಮಾಣ ಹೆಚ್ಚಿದ್ದರೇ ಅಂಥಹ ರಾಜ್ಯದಲ್ಲಿ ತಲಾದಾಯ ಹೆಚ್ಚಿರುತ್ತೆ.

ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಪಶ್ಚಿಮ ರಾಜ್ಯಗಳಾದ ಮಹಾರಾಷ್ಟ್ರ, ಮತ್ತು ಗುಜರಾತ್ ಗಳಲ್ಲಿ ಹೆಚ್ಚಿನ ಯುವ ಸಮುದಾಯವಿರುವುದರಿಂದ  ಆ ರಾಜ್ಯಗಳ ತಲಾದಾಯವೂ ಕೂಡ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT