ಸ್ಮೃತಿ ಇರಾನಿ 
ದೇಶ

ಸ್ಮೃತಿ ಇರಾನಿ ಅವರ ಕಾರು ಚೇಸಿಂಗ್ ಮಾಡಿದ್ದು ಏಕೆ?: ಸತ್ಯ ಬಹಿರಂಗಗೊಳಿಸಿದ ವಿದ್ಯಾರ್ಥಿಗಳು

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಕಾರನ್ನು ಹಿಂಬಾಲಿಸಿದ್ದ ದೆಹಲಿ ವಿವಿ ವಿದ್ಯಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇದೇ ವೇಳೆ ತಾವು ಏಕೆ ಕಾರು ...

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಕಾರನ್ನು ಹಿಂಬಾಲಿಸಿದ್ದ ದೆಹಲಿ ವಿವಿ ವಿದ್ಯಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇದೇ ವೇಳೆ ತಾವು ಏಕೆ ಕಾರು ಹಿಂಬಾಲಿಸಿದೆವು ಎಂಬುದರ ಬಗ್ಗೆ ಬಂಧಿತ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ಕಾರು ಹಿಂಬಾಲಿಸಿದ ಇಬ್ಬರು ವಿದ್ಯಾರ್ಥಿಗಳು ಇರಾನಿ ಅವರ ಕ್ಷಮೆ ಕೇಳಿದ್ದು. ಕೇವಲ ತಮಾಷೆಗಾಗಿ ತಾವು ಹಾಗೆ ಮಾಡಿದ್ದು ಎಂದು ಹೇಳಿದ್ದಾರೆ.

ನಾವು ನಾಲ್ಕು ಜನ ಸ್ನೇಹಿತರು ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ತೆರಳಿ ಅಲ್ಲಿ ಮದ್ಯ ಸೇವಿಸಿ ಮನೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದೆವು. ನಾವು ನಿಯಮ ಉಲ್ಲಂಘಿಸಿದ್ದನ್ನು ಒಪ್ಪಿಕೊಳ್ಳುತ್ತೇವೆ, ನಾವು ಜೋರಾಗಿ ಮ್ಯೂಸಿಕ್ ಹಾಕಿಕೊಂಡು ವಿಡಿಯೋ ರೆಕಾರ್ಡ್ ಮಾಡುತ್ತಿದ್ದೆವು. ನಾವು ಕೇವಲ ಫನ್ನಿ ವಿಡಿಯೋಗಳನ್ನು ರೆಕಾರ್ಡಾ ಮಾಡುತ್ತಿದ್ದೆವು, ನಾವು ಕಾರನ್ನು ಓವರ್ ಟೇಕ್ ಮಾಡಿದಾಗ, ಅದರಲ್ಲಿ ಸ್ಮೃತಿ ಇರಾನಿ ಇದ್ದಾರೆಂದು ತಿಳಿದಿರಲಿಲ್ಲ. ಒಂದು ವೇಳೆ ಅದರಲ್ಲಿ ಇರಾನಿ ಇದ್ದಾರೆ ಎಂದು ತಿಳಿದಿದ್ದರೇ ನಾವು ಓವರ್ ಟೇಕ್ ಮಾಡುತ್ತಿರಲಿಲ್ಲ ಎಂದು ಆರೋಪಿ ವಿದ್ಯಾರ್ಥಿ ಹೇಳಿದ್ದಾನೆ.

ನಾವು ಮಾಡಿರುವ ತಪ್ಪಿಗಾಗಿ ನಾವು ಕ್ಷಮೆ ಕೇಳುತ್ತೇವೆ, ಆದರೆ ನಾವು ಆಕ್ಷೇಪಾರ್ಹವಾದದ್ದನ್ನು ಮಾಡಿಲ್ಲ, ಆದರೆ ನಾವು ಕೆಟ್ಟದ್ದು ಮಾಡಿದ್ದೇವೆ ಎಂದು ಅವರಿಗೆ ಅನ್ನಿಸಿದರೇ ನಾವು ಕ್ಷಮೆ ಯಾಚಿಸುತ್ತೇವೆ, ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

SCROLL FOR NEXT