ಜೋಧಾಬಾಯಿ (ಸಾಂಕೇತಿಕ ಚಿತ್ರ) 
ದೇಶ

ಜೋಧಾಬಾಯಿ ರಜಪೂತ ರಾಣಿ ಅಲ್ಲ ಪೋರ್ಚುಗಲ್ ಮಹಿಳೆ?: ಗೋವಾ ಲೇಖಕನ ಪುಸ್ತಕದ ಉಲ್ಲೇಖ

"ಅಕ್ಬರ್ ನ ಪತ್ನಿಯರ ಪೈಕಿ ಒಬ್ಬಳು ಎಂದು ಉಲ್ಲೇಖಿತವಾಗಿರುವ ರಾಣಿ ಜೋಧಾಬಾಯಿ ರಜಪೂತ ರಾಣಿ ಅಲ್ಲ, ಆಕೆ ಪೋರ್ಚುಗಲ್ ಮಹಿಳೆ" ಹೀಗಂತ ಹೇಳುವ ಮೂಲಕ ಗೋವಾ ಮೂಲದ ಲೇಖಕ ಲೂಯಿಸ್ ಡೆ ಆಸೀಸ್...

ಪಣಜಿ: "ಅಕ್ಬರ್ ನ ಪತ್ನಿಯರ ಪೈಕಿ ಒಬ್ಬಳು ಎಂದು ಉಲ್ಲೇಖಿತವಾಗಿರುವ ರಾಣಿ ಜೋಧಾಬಾಯಿ ರಜಪೂತ ರಾಣಿ ಅಲ್ಲ, ಆಕೆ ಪೋರ್ಚುಗಲ್ ಮಹಿಳೆ" ಹೀಗಂತ ಹೇಳುವ ಮೂಲಕ ಗೋವಾ ಮೂಲದ ಲೇಖಕ ಲೂಯಿಸ್ ಡೆ ಆಸೀಸ್ ಹೊಸ ಚರ್ಚೆಯನ್ನು ಮುಂದಿಟ್ಟಿದ್ದಾರೆ.
ಪೋರ್ಚುಗೀಸ್ ಇಂಡಿಯಾ ಆಂಡ್ ಮೊಘಲ್ ರಿಲೇಷನ್ಸ್ 1510-1735 ಎಂಬ ಪುಸ್ತಕದಲ್ಲಿ ಲೂಯೀಸ್ ಜೋಧಾಬಾಯಿ ಅವರನ್ನು ರಜಪೂತ ರಾಣಿಯೇ ಅಲ್ಲ, ಆಕೆಯೊಬ್ಬ ಪೋರ್ಚುಗಲ್ ಮಹಿಳೆ ಯಾಗಿದ್ದು (ಡೊನಾ ಮಾರಿಯಾ ಮಸ್ಕರೇನ್ಹಸ್), ಸಂಚಾರದಲ್ಲಿದ್ದಾಗ ಆಕೆ ಹಾಗೂ ಆಕೆಯ ಸಹೋದರಿ ಜುಲೈನಾಳನ್ನು ಸೆರೆ ಹಿಡಿದು ಗುಜರಾತ್ ನ ಸುಲ್ತಾನ್ ಬಹದ್ದೂರ್ ಷಾ 1500 ರ ಸುಮಾರಿನಲ್ಲಿ ಅಕ್ಬರ್ ಗೆ ಉಡುಗೊರೆಯಾಗಿ ನೀಡಿರಬಹುದೆಂದು ಲೇಖಕ ಅಭಿಪ್ರಾಯಪಟ್ಟಿದ್ದಾರೆ. 
ಡೊನಾ ಮಾರಿಯಾ ಮಸ್ಕರೇನ್ಹಸ್ ಅಕ್ಬರ್ ನ ಆಸ್ಥಾನಕ್ಕೆ ಬಂದಾಗ ಆಕೆಯೊಂದಿಗೆ ಅಕ್ಬರ್ ಗೆ ಪ್ರೇಮಾಂಕುರವಾಗುತ್ತದೆ. ಅದಾಗಲೇ ವಿವಾಹವಾಗಿದ್ದ ಅಕ್ಬರ್ ಗೆ 18 ವರ್ಷ ಹಾಗೂ ಡೊನಾ ಮಾರಿಯಾ ಮಸ್ಕರೇನ್ಹಸ್ ಗೆ 17 ವರ್ಷವಾಗಿದ್ದಿರಬಹುದು. ಈಕೆಯೇ ಜೋಧಾ ಆಗಿರಬಹುದು. ಆದರೆ ಮೊಘಲ್ ದೊರೆಗಳ ಆಸ್ಥಾನದಲ್ಲಿ ನಮ್ಮವರಿದ್ದರು ಎಂದು ಒಪ್ಪಿಕೊಳ್ಳುವುದಕ್ಕೆ ಪೋರ್ಚುಗೀಸ್ ಹಾಗೂ ಕ್ಯಾಥೋಲಿಕ್ ಗಳು ಇಷ್ಟಪಡುವುದಿಲ್ಲ. ಮತ್ತೊಂದೆಡೆ ಕ್ರುಸೇಡ್ ಪ್ರಾರಂಭವಾದಾಗಿನಿಂದಲೂ ಮೊಘಲ್ ಸಾಮ್ರಾಟರ ವಿರುದ್ಧ ಹೋರಾಡಿದ ಕ್ರೈಸ್ತ ಸಮುದಾಯದ ಮಹಿಳೆ ಮೊಘಲ್ ದೊರೆಯ ಪತ್ನಿಯಾಗಿದ್ದಳು ಎಂಬುದನ್ನು ಮೊಘಲರೂ ಒಪ್ಪುವುದಿಲ್ಲ. ಆದ್ದರಿಂದ ಬ್ರಿಟೀಷರು ಜೋಧಾಬಾಯಿ ಎಂಬ ಕಥೆ ಹೆಣೆದರು ಎಂದಿದ್ದಾರೆ ಗೋವಾ ಮೂಲದ ಲೇಖಕ ಲೂಯಿಸ್ ಡೆ ಆಸೀಸ್.   
ಲೂಯಿಸ್ ಡೆ ಆಸೀಸ್ ಬರೆದಿರುವ ಪೋರ್ಚುಗೀಸ್ ಇಂಡಿಯಾ ಆಂಡ್ ಮೊಘಲ್ ರಿಲೇಷನ್ಸ್ 1510-1735 ಸುಮಾರು 173 ಪುಟಗಳ ಪುಸ್ತಕವಾಗಿದ್ದು ಬ್ರಾಡ್ ವೇ ಪಬ್ಲಿಷಿಂಗ್ ಹೌಸ್ ನಿಂದ ಪ್ರಕಟಗೊಂಡಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT