ಸಂಗ್ರಹ ಚಿತ್ರ 
ದೇಶ

ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ: ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ

ತಲ್ಲಾಖ್ ಪದ್ಧತಿಯನ್ನು ಬೇಕಾಬಿಟ್ಟಿ ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡುತ್ತಿರುವ ಮುಸ್ಲಿಂ ಗಂಡಂದಿರ ದಬ್ಬಾಳಿಕೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ ಮಾಡುವುದಾಗಿ ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ ನೀಡಿದೆ.

ನವದೆಹಲಿ: ತಲ್ಲಾಖ್ ಪದ್ಧತಿಯನ್ನು ಬೇಕಾಬಿಟ್ಟಿ ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡುತ್ತಿರುವ ಮುಸ್ಲಿಂ ಗಂಡಂದಿರ ದಬ್ಬಾಳಿಕೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ  ಸಮಾಜದಿಂದಲೇ ಬಹಿಷ್ಕಾರ ಮಾಡುವುದಾಗಿ ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ ನೀಡಿದೆ.

ವಿವಾದಿತ ತ್ರಿವಳಿ ತಲ್ಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ವಿವಾದಿತ ಪದ್ದತಿಯನ್ನು ನಿಷೇಧಗೊಳಿಸುವಂತೆ ವ್ಯಾಪಕ ಮುಸ್ಲಿಂ ಮಹಿಳಾ ಸಂಘಟನೆಗಳು ಆಗ್ರಹಿಸುತ್ತಿವೆ. ಈ ಹಿಂದಿನ  ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ತ್ರಿವಳಿ ತಲ್ಲಾಖ್ ನಿಷೇಧ ಕುರಿತು ಸಮಯಾವಕಾಶ ಕೇಳಿದ್ದ ಮುಸ್ಲಿಂ ಕಾನೂನು ಮಂಡಳಿ ಇದೀಗ ತನ್ನ ಮೊದಲ ಹೆಜ್ಜೆಯನ್ನಿಟ್ಟುದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದರೆ ಅಂತಹವರನ್ನು  ಸಮಾಜದಿಂದಲೇ ಬಹಿಷ್ಕರಿಸಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದೆ.

ಇದೇ ವೇಳೆ ತ್ರಿವಳಿ ತಲ್ಲಾಖ್ ಬಗ್ಗೆ ಮಾಧ್ಯಮಗಳಲ್ಲಿ ಎದ್ದಿರುವ ಚರ್ಚೆ ಕುರಿತಂತೆ ಮಾತನಾಡಿದ ಮುಸ್ಲಿಂ ಕಾನೂನು ಮಂಡಳಿ, ತಲ್ಲಾಖ್ ಪದ್ಧತಿ ಬಗ್ಗೆ ಕೆಲ ತಪ್ಪು ಗ್ರಹಿಕೆಗಳಿದ್ದು, ಇದನ್ನು ನಿವಾರಣೆ ಮಾಡುವ ಸಲುವಾಗಿಯೇ ಕೆಲ  ನೀತಿ ಸಂಹಿತೆಗಳನ್ನು ಜಾರಿ ಮಾಡಲು ಮಂಡಳಿ ಮುಂದಾಗಿದೆ ಎಂದು ಹೇಳಿದೆ.

ನಿನ್ನೆಯಷ್ಟೇ ವಿವಾದಕ್ಕೀಡಾಗಿರುವ ಈ ವಿಚಾರದ ಬಗ್ಗೆ ತಾನೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದ ಮಂಡಳಿ ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಹೇಳಿತ್ತು. ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ  ಕೈಗೊಳ್ಳಲಾಗುತ್ತದೆ ಎಂದು ಮಂಡಳಿಯ ನಿವೃತ್ತ ಅಧಿಕಾರಿ ಮೌಲಾನಾ ಖಲೀದ್ ಆರ್ ಫಿರಂಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT